ಶುಕ್ರವಾರ, ಆಗಸ್ಟ್ 29, 2025

ಗಣಪತಿ ಮೂರ್ತಿ ವಿಸರ್ಜನೆ : ಮೆರವಣಿಗೆಯಲ್ಲಿ ಯುವಕರ ಸಂಭ್ರಮ

ಭದ್ರಾವತಿ ನಗರದ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಶಾಲೆ ಮುಂಭಾಗ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಶುಕ್ರವಾರ ವಿಸರ್ಜಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಶಾಲೆ ಮುಂಭಾಗ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಶುಕ್ರವಾರ ವಿಸರ್ಜಿಸಲಾಯಿತು. 
    ಸುಮಾರು ೬ ಅಡಿ ಎತ್ತರದ ಆಕರ್ಷಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ೩ ದಿನಗಳ ಕಾಲ ಆರಾಧಿಸಿ ಸಂಜೆ ಕಲಾತಂಡಗಳೊಂದಿಗೆ ಜನ್ನಾಪರ ಪ್ರಮುಖ ರಸ್ತೆಗಳಲ್ಲಿ ಗಣಪತಿ ಮೂರ್ತಿ ಮೆರವಣಿಗೆ ನಡೆಸಲಾಯಿತು. ಯುವಕರು ಕಲಾತಂಡಗಳ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಾತ್ರಿ ಜನ್ನಾಪುರ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ