ಶನಿವಾರ, ಸೆಪ್ಟೆಂಬರ್ 20, 2025

ರಾತ್ರಿ ವೇಳೆ ವೈದ್ಯರೊಬ್ಬರ ಮನೆಯ ಆವರಣಕ್ಕೆ ನುಗ್ಗಿದ್ದ ಮಂಕಿಕ್ಯಾಪ್ ಧರಿಸಿದ ಗುಂಪು

ಸಿದ್ದಾರೂಢನಗರದಲ್ಲಿ ಘಟನೆ, ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ 

ಭದ್ರಾವತಿ ನಗರಸಭೆ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ ೭-೮ ಜನರ ಗುಂಪೊಂದು ಸಂಚರಿಸಿ ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಪೊಲೀಸಲು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ ೭-೮ ಜನರ ಗುಂಪೊಂದು ಸಂಚರಿಸಿ ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಪೊಲೀಸಲು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. 
    ಸಿದ್ದರೂಢನಗರದ ಪ್ರಸಿದ್ದ ವೈದ್ಯ ಡಾ. ಅಶ್ವತ್ಥ್‌ನಾರಾಯಣರವರ ಕ್ಲಿನಿಕ್ ಒಳಗೊಂಡಿರುವ ನಿವಾಸದ ಕಾಂಪೌಂಡ್ ಒಳಗೆ ರಾತ್ರಿ ವೇಳೆ ಮಂಕಿಕ್ಯಾಪ್ ಧರಿಸಿರುವ ಗುಂಪು ನುಗ್ಗಿದ್ದು, ಕೆಲವು ಸಮಯಗಳ ನಂತರ ಹಿಂದಿರುಗಿದೆ. ಈ ವೇಳೆಗೆ ಈ ಮಾರ್ಗದಲ್ಲಿ ಬೀಟ್ ಪೊಲೀಸರು ಸಹ ಸಂಚರಿಸಿದ್ದು, ಆದರೆ ಈ ಗುಂಪಿನ ಬಗ್ಗೆ ಯಾವುದೇ ಮಾಹಿತಿ ಅವರಿಗೆ ತಿಳಿದಿಲ್ಲ ಎನ್ನಲಾಗಿದೆ. 
    ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದ್ದು, ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಮಾಹಿತಿ ತಿಳಿದ ಪೊಲೀಸರು ಡಾ. ಅಶ್ವಸ್ಥ್‌ನಾರಾಯಣರವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ೭-೮ ಜನರ ಗುಂಪು ಬಂದು ಹೋಗಿರುವುದು ತಿಳಿದು ಬಂದಿದೆ. ಆದರೆ ಈ ಗುಂಪಿನಿಂದ ನಿವಾಸಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಈ ಹಿನ್ನಲೆಯಲ್ಲಿ ಯಾರು ದೂರು ನೀಡಿಲ್ಲ. ಈ ಘಟನೆ ಕಳೆದ ೨ ದಿನಗಳ ಹಿಂದೆ ನಡೆದಿದೆ. ಆದರೆ ಈ ಘಟನೆ ಸಂಬಂಧ ಚೆಡ್ಡಿ ಗ್ಯಾಂಗ್ ಎಂದು ಸುಳ್ಳು ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಚಡ್ಡಿ ಗ್ಯಾಂಗ್ ಹಾಗು ಈ ಗುಂಪಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ