ಶನಿವಾರ, ಸೆಪ್ಟೆಂಬರ್ 6, 2025

ಲಕ್ಷ್ಮಮ್ಮ ನಿಧನ

   ಲಕ್ಷ್ಮಮ್ಮ  
ಭದ್ರಾವತಿ: ನಗರದ ಚಾಮೇಗೌಡ ಏರಿಯಾ ನಿವಾಸಿ ಜಮೀನ್ದಾರ್ ದಿವಂಗತ ಬಿ.ಕೆ ನಾರಾಯಣಸ್ವಾಮಿ ಅವರ ಪತ್ನಿ ಲಕ್ಷ್ಮಮ್ಮ(೮೫) ವಯೋ ಸಹಜವಾಗಿ ಶನಿವಾರ ಬೆಳಗಿನ ಜಾವ ಅವರ ನಿವಾಸದಲ್ಲಿ ನಿಧನ ಹೊಂದಿದರು. 
    ಇವರಿಗೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವಾಸು ಮತ್ತು ರವಿ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ನಗರದ ಹುತ್ತಾ ಕಾಲೋನಿ ಹಿಂದೂ ರುದ್ರ ಭೂಮಿಯಲ್ಲಿ ಸಂಜೆ ಅಂತ್ಯ ಸಂಸ್ಕಾರ ನೆರವೇರಿತು. 
    ಇವರ ನಿಧನಕ್ಕೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗು ನೃಪತುಂಗ ಡಾ. ರಾಜ್‌ಕುಮಾರ್ ಅಭಿಮಾನಿಗಳ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ