ಬುಧವಾರ, ಸೆಪ್ಟೆಂಬರ್ 17, 2025

ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಚಾಲಕ ಸಾವು

ಆಟೋ ಹಾಗು ಲಾರಿ ಚಾಲಕ ಚನ್ನಕೇಶವ 
    ಭದ್ರಾವತಿ : ತಾಲೂಕಿನ ಯರೇಹಳ್ಳಿ ಗಾಂಧಿನಗರದ ನಿವಾಸಿ, ಆಟೋ ಹಾಗು ಲಾರಿ ಚಾಲಕ ಚೆನ್ನಕೇಶವ(೪೮) ಮಂಗಳವಾರ ತಿಪಟೂರಿನಲ್ಲಿ ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಹಿನ್ನಲೆಯಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. 
    ಆಟೋ ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಇವರು ಕಳೆದ ಎರಡು ತಿಂಗಳಿನಿಂದ ತಿಪಟೂರಿನ ಕಲ್ಲು ಕ್ವಾರೆಯಲ್ಲಿ ಲಾರಿ ಚಾಲಕ ಕೆಲಸಕ್ಕೆಂದು ತೆರಳಿದ್ದರು. ಕ್ವಾರೆಯಲ್ಲಿ ನಿಯಂತ್ರಣ ಕಳೆದುಕೊಂಡು ಲಾರಿ ಸುಮಾರು ೪೦ ಅಡಿ ಎತ್ತರದಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾರೆ. ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ಬುಧುವಾರ ಬೆಳಗಿನ ಜಾವ ಮೃತದೇಹ ಗಾಂಧಿನಗರದ ಮನೆಗೆ ತರಲಾಗಿದ್ದು, ಸಂಜೆ ಗ್ರಾಮದ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
    ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಬಸವನಗುಡಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಆರ್ ಶಿವರಾಮ್, ಮುಖಂಡರಾದ ಸ್ವಾಮಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

1 ಕಾಮೆಂಟ್‌: