ಬುಧವಾರ, ಅಕ್ಟೋಬರ್ 8, 2025

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ನೂತನ ತಾಲೂಕು ಘಟಕ ಅಸ್ತಿತ್ವಕ್ಕೆ

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದಿಂದ ರಾಜ್ಯಾಧ್ಯಕ್ಷ ಓಂಕಾರಪ್ಪ ಎಂ. ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ನೂತನವಾಗಿ ಭದ್ರಾವತಿ ತಾಲೂಕು ಘಟಕ ರಚಿಸಲಾಯಿತು. 
    ಭದ್ರಾವತಿ : ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದಿಂದ ರಾಜ್ಯಾಧ್ಯಕ್ಷ ಓಂಕಾರಪ್ಪ ಎಂ. ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ನೂತನ ತಾಲೂಕು ಘಟಕ ರಚಿಸಲಾಯಿತು. 
    ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷರಾದ ನಾಗರಾಜ್ ಕುಮಾರ್, ಉಪಾಧ್ಯಕ್ಷೆ ಲಕ್ಷ್ಮೀ ಕಳಸಣ್ಣ, ಕಾರ್ಯದರ್ಶಿ ಭಾಗ್ಯ ಪಿ.ಗೌಡ, ಸಂಘಟನಾ ಕಾರ್ಯದರ್ಶಿ ಸಿ. ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ನೂತನ ತಾಲೂಕು ಘಟಕ : 
    ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಈ.ಪಿ ಬಸವರಾಜು, ಅಧ್ಯಕ್ಷರಾಗಿ ಪ್ರೇಮಾಕುಮಾರಿ, ಉಪಾಧ್ಯಕ್ಷರಾಗಿ ಟಿ.ವಿ ಜೋಸೆಫ್, ಎನ್.ಪಿ ಡೇವಿಡ್, ಶೃತಿ ನವೀನ್, ನೂರುಲ್ಲಾ, ಕಾರ್ಯದರ್ಶಿಯಾಗಿ ಆಶಾರಾಣಿ ಕೆ.ಬಾಬು, ಸಂಘಟನಾ ಕಾರ್ಯದರ್ಶಿಯಾಗಿ ಆರೀಫ್ ಹುಸೇನ್, ಪವನ್ ಬಾಬು, ಕಾನೂನು ಸಲಹೆಗಾರರಾಗಿ ಸೈಯದ್ ಜಮೀರ್ ಮತ್ತು ಜಿ. ವಿಜಯಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ