ಕೋವಿಡ್-೧೯ ಲಸಿಕೆ ಪೂರ್ವಸಿದ್ಧತೆ ಪರಿಶೀಲನೆ( ಡ್ರೈ ರನ್) ಕಾರ್ಯಕ್ರಮ ಶುಕ್ರವಾರ ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಭದ್ರಾವತಿ, ಜ. ೮: ಕೋವಿಡ್-೧೯ ಲಸಿಕೆ ಪೂರ್ವಸಿದ್ಧತೆ ಪರಿಶೀಲನೆ( ಡ್ರೈ ರನ್) ಕಾರ್ಯಕ್ರಮ ಶುಕ್ರವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ನಾಗರಾಜ್ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ನೀಲೇಶ್ ರಾಜ್, ಕಿರಣ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಲಸಿಕೆ ಹಾಕಲು ಕೈಗೊಂಡ ಕ್ರಮಗಳು:
ಆರೋಗ್ಯ ಇಲಾಖೆಯ ೨೫ ಮಂದಿ ಸಿಬ್ಬಂದಿಗಳಿಗೆ ಪೂರ್ವ ಪರಿಶೀಲನಾ ಲಸಿಕೆ ಹಾಕಲಾಯಿತು. ಇದಕ್ಕೂ ಮೊದಲು ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಸಿಕೊಂಡಿರುವವರ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ನಂತರ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟು ೩ ಮಂದಿ ವ್ಯಾಕ್ಸಿನೇಷನ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರು. ಈ ಪೈಕಿ ಇಬ್ಬರು ಲಸಿಕೆ ಹಾಕುವ ಅಧಿಕಾರಿಗಳಾಗಿದ್ದರು. ೧ ಕೊಠಡಿಯಲ್ಲಿ ಲಸಿಕೆ ಹಾಕಲಾಯಿತು. ಮತ್ತೊಂದು ಕೊಠಡಿಯಲ್ಲಿ ಲಸಿಕೆ ಹಾಕಿದ ನಂತರ ಅರ್ಧ ತಾಸುಗಳ ವರೆಗೆ ಪರಿಶೀಲನೆ ನಡೆಸಲಾಯಿತು.