ಎಸ್.ಜಿ ಪೃಥ್ವಿ ದೆಹಲಿಯ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಭದ್ರಾವತಿ, ಜ. ೬: ನಗರದ ನಿವಾಸಿ ಎಸ್.ಜಿ ಪೃಥ್ವಿ ದೆಹಲಿಯ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಕುಲಸಚಿವ ಶಿವಕುಮಾರ ಶರ್ಮ, ನಿರ್ದೇಶಕರಾದ ನೀರಜ್ ಜೈನ್, ವಿಜ್ಞಾನಿ ಪ್ರೊಫೆಸರ್ ಎಲ್ಲೋರಸೇನ್ ಮಾರ್ಗದರ್ಶನದಲ್ಲಿ 'ಇನ್ ಫ್ಲೂಯೆನ್ಸ್ ಆಫ್ ಡೈಸ್ ರೆಗ್ಯುಲೇಟೆಡ್ ಮೆಟಾಬೋಲಿಸಂ ಆನ್ ಗೆನೆಸ್ ಅಸೋಸಿಯೇಟೆಡ್ ವಿತ್ ಇಮ್ಯೂನ್-ಎವೇಷನ್ ಅಂಡ್ ಸೆಲ್ಯೂಲಾರ್ ಸರ್ಕೇಡಿಯನ್ ರಿಥಮ್ ಇನ್ ಗ್ಲಿಯೋಮಾ' ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಎಸ್.ಜಿ ಪೃಥ್ವಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ದೈಹಿಕ ಶಿಕ್ಷಕ ಶಿವಲಿಂಗೇಗೌಡ ಮತ್ತು ಗೌರಮ್ಮ ದಂಪತಿ ಪುತ್ರರಾಗಿದ್ದು, ಇವರನ್ನು ವಿಇಎಸ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
No comments:
Post a Comment