![](https://blogger.googleusercontent.com/img/b/R29vZ2xl/AVvXsEil8ReZQia0mP4Y8ABCl8IJUdj2gTdPRYW28gPsK0aAdHY5jmhnPEQpw2sQ4GH-Kj7nzkTgR1zECetxK6C5AwQ4WF56JgrxPbtkAl5vF2ZkExPYsdySbkUfTMQDDx8RC83nFotdBbyOZskT/w400-h220-rw/D16-BDVT1-726547.jpg)
ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಎಲ್ ರವಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಜು. ೧೬: ವೃತ್ತಿ ಬದುಕಿನ ಜೊತೆಗೆ ಸಮಾಜದಲ್ಲಿ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಬಯಸುವವರಿಗೆ ರೋಟರಿ ಕ್ಲಬ್ನಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಎಲ್ ರವಿ ಹೇಳಿದರು.
ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೇವಾ ಕಾರ್ಯ ಕೈಗೊಳ್ಳಲು ರೋಟರಿ ಕ್ಲಬ್ ಹೆಚ್ಚು ಸಹಕಾರಿಯಾಗಿದ್ದು, ಸದಸ್ಯರು ತಮ್ಮ ವೃತ್ತಿ, ಕುಟುಂಬ, ಸೇವೆಗಳ ಮಧ್ಯೆ ಸಮತೋಲನ ಸಾಧಿಸುವುದು ಬಹಳ ಮುಖ್ಯ. ಆ ಮೂಲಕ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಬೇಕು. ಕ್ಲಬ್ನಲ್ಲಿ ಕೇವಲ ಪುರುಷರಿಗೆ ಮಾತ್ರ ಉನ್ನತ ಹುದ್ದೆಗಳು ಮೀಸಲಾಗಿಲ್ಲ. ಮಹಿಳೆರಿಗೂ ಸಹ ಮೀಸಲಿವೆ ಎಂದರು.
ಕೊರೊನಾ ಸೋಂಕಿನಿಂದ ಮೃತಪಟ್ಟ ಸಮಾರು ೧೦೫ಕ್ಕೂ ಹೆಚ್ಚು ಮೃತದೇಹಗಳ ಅಂತ್ಯ ಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಬಜರಂಗದಳ ಕಾರ್ಯರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಾಯಕ ರಾಜ್ಯಪಾಲ ಎಂ.ಪಿ ಆನಂದಮೂರ್ತಿ, ವಲಯಾಧಿಕಾರಿ ಪಿ.ಎನ್ ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ಬಿ.ಎಂ.ಶಾಂತಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯುಲ್ಲಿ ಉಪಸ್ಥಿತರಿದ್ದರು.
ಎಚ್.ವಿ ಆದರ್ಶ ಅಧ್ಯಕ್ಷತೆ ವಹಿಸಿದ್ದರು. ಶೃತಿ, ಕುಸುಮಾ ಪ್ರಾರ್ಥಿಸಿದರು. ಕೆ.ಎಸ್ ಶೈಲೇಂದ್ರ ಸ್ವಾಗತಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಎಂ.ಎನ್ ಗಿರೀಶ್ ವರದಿ ಮಂಡಿಸಿದರು. ಎಸ್. ಅಡವೀಶಯ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಎಚ್.ವಿ ಆದರ್ಶ, ಉಪಾಧ್ಯಕ್ಷರಾಗಿ ಪಿ. ಸುಧಾಕರ ಶೆಟ್ಟಿ, ಕಾರ್ಯದರ್ಶಿಯಾಗಿ ಜಿ. ರಾಘವೇಂದ್ರ ಉಪಾಧ್ಯಾಯ, ಜಂಟಿ ಕಾರ್ಯದರ್ಶಿಯಾಗಿ ಎಂ. ನಿರಂಜನ, ಖಜಾಂಚಿಯಾಗಿ ಅಮಿತ್ಕುಮಾರ್ ಜೈನ್, ವಿವಿಧ ಸೇವಾ ಚಟುವಟಿಕೆಗಳ ನಿರ್ದೇಶಕರುಗಳಾಗಿ ಕೂಡ್ಲಿಗೆರೆ ಹಾಲೇಶ್, ಕೆ.ಎಚ್ ತೀರ್ಥಯ್ಯ, ಪ್ರಭಾಕರ ಬೀರಯ್ಯ, ಕೆ.ಎಸ್ ಶೈಲೇಂದ್ರ, ಡಾ.ಕೆ ನಾಗರಾಜ್, ಧರ್ಮೇಂದ್ರ ಹಾಗು ಆಧ್ಯಕ್ಷರುಗಳಾಗಿ ಕೆ. ಸುಂದರ ಬಾಬು, ಸಿ. ಭರತ್, ಟಿ.ಎಸ್ ದುಷ್ಯಂತರಾಜ್, ವಾದಿರಾಜ ಅಡಿಗ ನೇಮಕಗೊಂಡರು.
ನೂತನ ಸದಸ್ಯರಾಗಿ ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಆಸ್ಮಯ, ಶಕುಂತಲ ಕೂಡ್ಲಿಗೆರೆ ಹಾಲೇಶ್, ಕುಸುಮಾ ತೀರ್ಥಯ್ಯ ಸೇರ್ಪಡೆಗೊಂಡರು.
ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಲತಾ ದುಷ್ಯಂತರಾಜ್, ಉಪಾಧ್ಯಕ್ಷರಾಗಿ ಗೀತಾ ಡಾ.ಆರ್.ಸಿ ಬೆಂಗಳೂರಿ, ಕಾರ್ಯದರ್ಶಿಯಾಗಿ ಡಾ.ಮಯೂರಿ ಮಲ್ಲಿಕಾರ್ಜುನ್, ಖಜಾಂಚಿಯಾಗಿ ಲತಾ ಬಾಲಚಂದ್ರ ನೇಮಕಗೊಂಡರು.