ಭದ್ರಾವತಿ, ಜೂ. 16: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ 9ನೇ ವರ್ಷ ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಸಂಪರ್ಕ್ ಸೇ ಸಮರ್ಥನ್ ಅಭಿಯಾನ ಬಿಜೆಪಿ ತಾಲೂಕು ಮಂಡಲ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಸಂಸದ ಬಿ.ವೈ ರಾಘವೇಂದ್ರ, ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವದಲ್ಲಿ ಜಿಲ್ಲಾ ಸಂಪರ್ಕ ಸೆ ಸಮರ್ಥನ್ ಅಭಿಯಾನ ತಂಡ ನಗರದ ವಿವಿಧೆಡೆ ಪ್ರಮುಖರ ಮನೆಗಳಿಗೆ ತೆರಳಿ ಚರ್ಚೆ ನಡೆಸಿತು.
ಉಂಬ್ಳೆಬೈಲು ರಸ್ತೆ ಸಂಜಯ್ ನಗರದ ಮೀನು ಉದ್ಯಮಿ ಎ. ಮಾಧು, ವೀರಾಪುರ ಗ್ರಾಮದ ಸುಧಾಕರ್ ಶೆಟ್ಟಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಹುಡ್ಕೋ ಕಾಲೋನಿಯ ಸತ್ಯ ಭದ್ರಾವತಿ, ಕುರುಬ ಸಮಾಜದ ಮುಖಂಡ ಕರಿಯಪ್ಪ ಸೇರಿದಂತೆ ಇನ್ನಿತರರ ಮನೆಗಳಿಗೆ ತಂಡ ತೆರಳಿತು.
ತಂಡದ ಪ್ರಮುಖರಾದ ಅಶೋಕ್ ಮೂರ್ತಿ, ಡಾ. ಧನಂಜಯ್ ಸರ್ಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಮಂಡಲ ಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ, ಅಭಿಯಾನ ತಂಡದ ಜಿಲ್ಲಾ ಸದಸ್ಯರಾದ ಪ್ರಶಾಂತ್ ಪಂಡಿತ್, ದಿನೇಶ್ ಆಚಾರ್ಯ, ಮುಖಂಡರಾದ ಮಂಗೋಟೆ ರುದ್ರೇಶ್, ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಕೆ.ಎನ್ ಶ್ರೀ ಹರ್ಷ, , ರಾಮಲಿಂಗಯ್ಯ, ಜಿ. ಆನಂದ ಕುಮಾರ್, ಮಲ್ಲೇಶ್, ವೇಲು, ಧರ್ಮಣ್ಣ. ಟೈಲರ್ ಸತೀಶ್, ಕರೀಗೌಡ, ಉಮಾವತಿ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.