ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ನೂತನ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ದೊಂಬಾಳೆ
ಭದ್ರಾವತಿ ನಗರದ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ರಾವ್ ದೊಂಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭದ್ರಾವತಿ: ಯಾವುದೇ ವ್ಯಕ್ತಿಗೆ ಮೊದಲು ತನ್ನ ಸಮುದಾಯ ಮುಖ್ಯವಾಗಿದ್ದು, ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿದಾಗ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದು ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ನೂತನ ಅಧ್ಯಕ್ಷ, ನ್ಯಾಯವಾದಿ ಎಚ್.ಆರ್ ಲೋಕೇಶ್ವರ್ ರಾವ್ ದೊಂಬಾಳೆ ಹೇಳಿದರು.
ಅವರು ಗುರುವಾರ ನಗರದ ಚನ್ನಗಿರಿ ರಸ್ತೆಯಲ್ಲಿರುವ ಸಂಘದ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಬೆಳವಣಿಗೆಯಲ್ಲಿ ಸಮುದಾಯದ ಹಿಂದಿನ ಹಿರಿಯರ ಪಾತ್ರ ಹೆಚ್ಚಿನದ್ದಾಗಿದ್ದು, ಸಂಘ ಮುನ್ನಡೆಸಿಕೊಂಡು ಹೋಗಲು ಪ್ರತಿಯೊಬ್ಬ ಸಹಕಾರ ಮುಖ್ಯವಾಗಿದೆ ಎಂದರು.
ಸಮುದಾಯ ಮುಖಂಡರಾದ ತಿಪ್ಪೇಶ್ರಾವ್, ಯಲ್ಲೋಜಿರಾವ್, ಬಸವಂತರಾವ್ ದಾಳೆ, ಸಿದ್ದೋಜಿರಾವ್, ಪ್ರಕಾಶ್ರಾವ್, ಬಿ.ಎಸ್ ರಾಜೇಶ್, ಡಿ.ಟಿ ಶ್ರೀಧರ್, ಟಿ.ಎಸ್ ದುಗ್ಗೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ಸಂಘದ ನೂತನ ಪದಾಧಿಕಾರಿಗಳು ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು. ಯಾವುದೇ ಸಂಧರ್ಭದಲ್ಲೂ ಸಮುದಾಯಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜದ ಎಲ್ಲಾ ಸಮುದಾಯದಗಳೊಂದಿಗೆ ಸೌಹಾರ್ದತೆ ಕಾಯ್ದುಕೊಂಡು ಮುನ್ನಡೆಯಬೇಕೆಂದರು.
ನೂತನ ನಿರ್ದೇಶಕರು:
ಕೃಷ್ಣೋಜಿರಾವ್, ಎಂ.ಆರ್ ರಾಜಾರಾವ್, ಜಗನ್ನಾಥ್ರಾವ್ ಗಾಯ್ಕ್ವಾಡ್, ವಿ. ರಾಮನಾಥ್ ಬರ್ಗೆ, ಬಿ. ನಾಗಪ್ಪ, ಎಚ್.ಆರ್ ಲೋಕೇಶ್ವರ್ರಾವ್ ದೊಂಬಾಳೆ, ಆರ್. ನಾಗರಾಜ್ರಾವ್, ಬಿ.ಎಲ್ ಶಂಕರ್ರಾವ್ ಜಾದವ್, ಮಂಜುನಾಥ್ರಾವ್ ಪವಾರ್, ಎಸ್. ಶಾಂತಕುಮಾರ್ ಗಾಯ್ಕ್ವಾಡ್, ಮಹೇಶ್ರಾವ್ ಹಜಾರೆ, ಇ. ಸುನಿಲ್ಗಾರ್ಗೆ, ಎಚ್. ರಂಗನಾಥ್ರಾವ್, ಎಸ್. ಸುರೇಶ್ರಾವ್ ಮತ್ತು ಎಚ್.ಎಲ್ ರಂಗನಾಥ್ರಾವ್ ಚವ್ಹಾಣ್ ಒಟ್ಟು ೧೫ ಮಂದಿ ನಿರ್ದೇಶಕರಿದ್ದಾರೆ.
ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಎಚ್.ಆರ್ ಲೋಕೇಶ್ವರ್ರಾವ್ ದೊಂಬಾಳೆ, ಉಪಾಧ್ಯಕ್ಷರಾಗಿ ಎಚ್.ಎಲ್ ರಂಗನಾಥ್ರಾವ್ ಚವ್ಹಾಣ್, ಪ್ರಧಾನ ಕಾರ್ಯದರ್ಶಿಯಾಗಿ ಇ. ಸುನಿಲ್ಗಾರ್ಗೆ, ಸಹ ಕಾರ್ಯದರ್ಶಿಯಾಗಿ ಎಚ್. ರಂಗನಾಥ್ರಾವ್ ಮತ್ತು ಖಜಾಂಚಿಯಾಗಿ ವಿ. ರಾಮನಾಥ್ ಬರ್ಗೆ ಅಧಿಕಾರ ಸ್ವೀಕರಿಸಿದರು. ವಿವಿಧ ಸಮುದಾಯಗಳ ಅಧ್ಯಕ್ಷರು, ಮುಖಂಡರು ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.