Sunday, May 2, 2021

೨ನೇ ವೀಕೆಂಡ್ ಲಾಕ್‌ಡೌನ್ ಯಶಸ್ವಿ : ಸಂಚಾರಕ್ಕೆ ಮತ್ತಷ್ಟು ಕಡಿವಾಣ

ಭದ್ರಾವತಿ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಜನ್ನಾಪುರ-ಹೊಸಸಿದ್ದಾಪುರ ರಸ್ತೆಯನ್ನು ಭಾನುವಾರ ಪೊಲೀಸರು ಬಂದ್ ಮಾಡುವ ಮೂಲಕ ಸಂಚಾರಕ್ಕೆ ಕಡಿವಾಣ ಹಾಕಿದರು.
     ಭದ್ರಾವತಿ, ಮೇ. ೨: ಕೊರೋನಾ ಸೋಂಕು ೨ನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಪ್ಯೂ ಒಂದೆಡೆಯಾದೆಡೆಯಾದರೆ, ಮತ್ತೊಂದೆಡೆ ಶನಿವಾರ ಮತ್ತು ಭಾನುವಾರ ಜಾರಿಗೊಳಿಸಿರುವ ವೀಕೆಂಡ್ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದೆ.
     ಬೆಳಿಗ್ಗೆ ೬ ರಿಂದ ೧೦ ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ನಂತರ ಪೊಲೀಸರು ಪ್ರಮುಖ ವೃತ್ತಗಳನ್ನು ಬ್ಯಾರಿಗೇಡ್‌ಗಳಿಂದ ಬಂದ್ ಮಾಡುವ ಮೂಲಕ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದರು. ಕೆಲವೆಡೆ ತುರ್ತು ಅಗತ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.  ಈ ನಡುವೆ ಕೆಲವೆಡೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಿದವು.
    ಉಳಿದಂತೆ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಪ್ರಮುಖ ವಾಣಿಜ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಜನರು ವೀಕೆಂಡ್ ಲಾಕ್‌ಡೌನ್‌ಗೆ ಪೂರಕವಾಗಿ ಸ್ಪಂದಿಸಿರುವುದು ಕಂಡು ಬಂದಿತು.

ಗಮನ ಸೆಳೆದ ಪಕ್ಷೇತರ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್

೩೩ನೇ ವಾರ್ಡ್‌ನಲ್ಲಿ ಎಂ.ಎ ಪದವಿಧರನನ್ನು ಆಯ್ಕೆ ಮಾಡಿದ ಮತದಾರರು

ಆರ್. ಮೋಹನ್‌ಕುಮಾರ್
    ಭದ್ರಾವತಿ, ಮೇ. ೨: ನಗರಸಭೆ ಹುತ್ತಾ ಕಾಲೋನಿ ವ್ಯಾಪ್ತಿಯ ವಾರ್ಡ್ ನಂ.೩೩ರಲ್ಲಿ ಪ್ರಬಲ ಅಭ್ಯರ್ಥಿಗಳ ನಡುವೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಆರ್. ಮೋಹನ್‌ಕುಮಾರ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
     ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಚ್. ರಂಗಪ್ಪನವರ ಪುತ್ರರಾಗಿರುವ ಎಂ.ಎ ಸ್ನಾತಕೋತ್ತರ ಪದವಿಧರ ಆರ್. ಮೋಹನ್‌ಕುಮಾರ್ ತಾವು ಹುಟ್ಟಿ ಬೆಳೆದ ಸ್ಥಳದ ಪರಿಸರದಲ್ಲಿನ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.  ಇದೆ ವಾರ್ಡ್‌ನಲ್ಲಿ ಜನರ ಸೇವೆ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
     ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅಲ್ಲದೆ ಈ ವಾರ್ಡಿನ ಹಿಂದಿನ ಅವಧಿಯ ಸದಸ್ಯೆ ಎಂ.ಎಸ್ ಸುಧಾಮಣಿ ಪುನರಾಯ್ಕೆ ಬಯಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಸಹ ನಡೆದಿರುವುದು ತಿಳಿದು ಬಂದಿತ್ತು. ಈ ನಡುವೆಯೂ ಸದ್ದಿಲ್ಲದೆ, ಪ್ರಚಾರದ ಭರಾಟೆ ಇಲ್ಲದೆ ಮೋಹನ್‌ಕುಮಾರ್ ಆಯ್ಕೆಯಾಗಿದ್ದಾರೆ.
     ಪತ್ರಿಕೆಯೊಂದಿಗೆ ಗೆಲುವಿನ ಸಂಭ್ರಮ ಹಂಚಿಕೊಂಡಿರುವ ಮೋಹನ್‌ಕುಮಾರ್, ವಾರ್ಡಿನ ಜನರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ಈ ಹಿಂದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸ್ಥಳೀಯರೊಂದಿಗೆ ಭಾಗಿಯಾಗಿದ್ದೇನೆ. ಈ ಹಿನ್ನಲೆಯಲ್ಲಿ ನನ್ನನ್ನು ಮೊದಲ ಬಾರಿಗೆ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಸಂಪೂರ್ಣವಾಗಿ ವಿಐಎಸ್‌ಎಲ್ ಕಾರ್ಮಿಕರ ವಸತಿ ಗೃಹಗಳನ್ನು ಒಳಗೊಂಡಿರುವ ವಾರ್ಡ್‌ನಲ್ಲಿ ಪ್ರಮುಖವಾಗಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು, ಉಳಿದಂತೆ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬರುತ್ತಿವೆ. ನಗರಸಭೆಯಿಂದ ಲಭ್ಯವಾಗುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಾರ್ಡ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ವಸುಧ ಮುಕುಂದ್ ನಿಧನ

ವಸುಧ ಮುಕುಂದ್
   ಭದ್ರಾವತಿ, ಮೇ. ೨: ಮಾಜಿ ಶಾಸಕ ಮಾಧವಚಾರ್‌ರವರ ಸೊಸೆ, ಹಳೇನಗರ ಮಹಿಳಾ ಸೇವಾ ಸಮಾಜದ ಹಿರಿಯ ಸದಸ್ಯೆ ವಸುಧ ಮುಕುಂದ್(೬೩) ಶನಿವಾರ ಸಂಜೆ ನಿಧನ ಹೊಂದಿದರು.
   ಇಬ್ಬರು ಗಂಡು ಮಕ್ಕಳು, ತಾಯಿ, ಸಹೋದರ, ಸಹೋದರಿಯರನ್ನು ಹೊಂದಿದ್ದರು. ೩-೪ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಹಳೇನಗರ ಮಹಿಳಾ ಸೇವಾ ಸಮಾಜ, ಬ್ರಾಹ್ಮಣ ಮಹಾಸಭಾ(ವಿಪ್ರ) ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೊರೋನಾ ಸೋಂಕಿಗೆ ಕರವೇ ಅಧ್ಯಕ್ಷ ಬಿ.ವಿ ಗಿರೀಶ್ ಬಲಿ

ಬಿ.ವಿ ಗಿರೀಶ್
ಭದ್ರಾವತಿ, ಮೇ. ೨: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ, ಹೋರಾಟಗಾರ ಬಿ.ವಿ ಗಿರೀಶ್(೩೬) ಭಾನುವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿಯನ್ನು ಹೊಂದಿದ್ದರು. ಹಲವು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಅನೇಕ ಕನ್ನಡಪರ ಹಾಗು ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಮಾನವ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
    ಇವರ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಮಾನವ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ನಗರದ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Saturday, May 1, 2021

ಕೊರೋನಾ, ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ


ಭದ್ರಾವತಿಯಲ್ಲಿ ಗೋಡೆ ಬರಹದ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಶನಿವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
    ಭದ್ರಾವತಿ, ಮೇ. ೧: ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ನಗರಸಭೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಕಟ್ಟಡ ಕಾರ್ಮಿಕರ ಸಂಘ ಹಾಗು ತಾಲೂಕು ಕುಂಚ ಕಲಾವಿದರ ಸಂಘ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಕೊರೋನಾ ಮತ್ತು ಪರಿಸರ ಜಾಗೃತಿ ಅಭಿಯಾನಕ್ಕೆ ನಗರಸಭೆ ಪೌರಾಯುಕ್ತ ಮನೋಹರ್ ಶನಿವಾರ ಚಾಲನೆ ನೀಡಿದರು.
    ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಿಂದಲೂ ಸ್ವಯಂ ಪ್ರೇರಣೆಯಿಂದ ಸ್ವಂತ ಖರ್ಚಿನಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಲಿಮ್ಕಾ ದಾಖಲೆ ಕುಂಚ ಕಲಾವಿದ ಬಿ. ಗುರುರವರು ನಗರದ ಪ್ರಮುಖ ಸ್ಥಳಗಳ ವೃತ್ತಗಳಲ್ಲಿ, ಬಸ್ ತಂಗುದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರವಣಿಗೆ ಮೂಲಕ ಹಾಗು ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಆಕರ್ಷಕ ಚಿತ್ತಾರಗಳ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಸಹ ಜಾಗೃತಿ ಕಾರ್ಯದಲ್ಲಿ ತೊಡಗಿದ್ದು, ಕಾಗದನಗರದ ಬಯಲು ರಂಗಮಂಟಪದಲ್ಲಿ ಚಾಲನೆ ನೀಡಲಾಯಿತು.
      ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್, ವಲಯ ಅರಣ್ಯಾಧಿಕಾರಿ ಕೆ.ಎಚ್. ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಶಿಲ್ಪಾ ನಾಯನಗೇಲಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಸುಂದರ್‌ಬಾಬು, ಕರಿಗೌಡ, ಕುಮಾರ್, ಪೀಟರ್, ಪ್ರಸನ್ನ, ಕೆ.ಜಿ ರವಿಕುಮಾರ್, ತಿಮ್ಮಪ್ಪ, ಕಮಲಕರ್, ನಾಗಣ್ಣ, ಸುಬ್ಬಣ್ಣ ಪೈಂಟರ್, ಲಕ್ಷ್ಮಣ್, ಸಿ.ಬಿ ನಂಜಪ್ಪ, ಜಿ. ರವಿಕುಮಾರ್, ಗಿರೀಶ್, ಸುರೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕೊರೋನಾ ಸೋಂಕಿನ ೨ನೇ ಅಲೆ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸಿ : ಕೆ.ಎಸ್ ಈಶ್ವರಪ್ಪ

ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ

ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕೊರೋನಾ ನಿಯಂತ್ರಣ ನಿರ್ವಹಣಾ ಸಭೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೧: ಕಳೆದ ಬಾರಿಗಿಂತ ಈ ಬಾರಿ ಕೊರೋನಾ ಸೋಂಕಿನ ೨ನೇ ಅಲೆ ತೀವ್ರತೆ ಹೆಚ್ಚಾಗಿದ್ದು, ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದರು.
    ಅವರು ಶನಿವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಕೊರೋನಾ ನಿಯಂತ್ರಣ ನಿರ್ವಹಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜನತೆ ಕಟ್ಟುನಿಟ್ಟಾಗಿ ಪಾಲಿಸಬೇಕು
     ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ತೆಗೆದುಕೊಂಡಿದ್ದು, ಸೋಂಕಿನ ನಿಯಂತ್ರಣಕ್ಕೆ ಲಸಿಕೆ ಹಾಕಲಾಗುತ್ತಿದೆ. ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಯಾವುದೇ ಆತಂಕವಿಲ್ಲದೆ ಹಾಕಿಸಿಕೊಳ್ಳಬೇಕು.  ಕೊರೋನಾ ಸೋಂಕಿನ ೨ನೇ ಅಲೆ ಪರಿಣಾಮಕಾರಿಯಾಗಿದ್ದು, ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರಸ್ತುತ ಪ್ರತಿಯೊಬ್ಬರ ಪ್ರಾಣ ರಕ್ಷಣೆ ಮುಖ್ಯವಾಗಿದ್ದು, ತಮ್ಮನ್ನು ತಾವು ಕೊರೋನಾದಿಂದ ರಕ್ಷಿಸಿಕೊಳ್ಳುವುದರ ಜೊತೆಗೆ ಸಮಾಜದ ಸ್ವಾಥ್ಯ ಕಾಪಾಡಬೇಕೆಂದರು.
ಎಂದರು.
     ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್‌ನಾಯ್ಕ್,  ಶಾಸಕ ಬಿ.ಕೆ. ಸಂಗಮೇಶ್ವರ್,  ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಭದ್ರಾವತಿ ನಗರಸಭೆ ಚುನಾವಣೆ ಫಲಿತಾಂಶ : ಕಾಂಗ್ರೆಸ್-ಜೆಡಿಎಸ್ ಮತ ಪ್ರಮಾಣದಲ್ಲಿ ಪೈಪೋಟಿ

ಭದ್ರಾವತಿ ನಗರಸಭೆಗೆ ಆಯ್ಕೆಯಾದ ನೂತನ ಸದಸ್ಯರು.
    
     ಭದ್ರಾವತಿ, ಮೇ. ೧: ಸುಮಾರು ೨ ವರ್ಷಗಳ ನಂತರ ನಡೆದ ನಗರಸಭೆ ೩೪ ವಾರ್ಡ್‌ಗಳ ವಾರ್ಡ್‌ಗಳ ಚುನಾವಣೆ ಫಲಿತಾಂಶ ಹಲವು ಕುತೂಹಲಗಳಿಗೆ ಕಾರಣವಾಗಿದ್ದು, ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಈ ಬಾರಿ ಪೈಪೋಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಈ ಬಾರಿ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ, ಎಸ್‌ಡಿಪಿಐ, ವೆಲ್‌ಫೇರ್ ಪಾರ್ಟಿ ಇಂಡಿಯಾ, ಎಐಎಂಐಎಂ ಪಕ್ಷಗಳು ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಈ ಹಿನ್ನಲೆಯಲ್ಲಿ ಪ್ರತಿಯೊಂದು ವಾರ್ಡ್‌ವಾರು ಫಲಿತಾಂಶ ಕುತೂಹಲಕಾರಿಯಾಗಿವೆ.
      ವಾರ್ಡ್ ನಂ.೧ :
     ಉಮಾವತಿ-೧೪೭(ಬಿಜೆಪಿ), ಜೆ. ಮೀನಾಕ್ಷಿ-೯೬೬(ಕಾಂಗ್ರೆಸ್), ಟಿ. ರೇಖಾ-೧೫೨೩(ಜೆಡಿಎಸ್) ಮತ್ತು ಕೆ. ಅನ್ನಪೂರ್ಣ-೪೨(ಪಕ್ಷೇತರ) ಹಾಗು ೧೬ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೨ :
 ಜೆ.ಸಿ ಗೀತಾರಾಜ್‌ಕುಮಾರ್-೯೨೯(ಕಾಂಗ್ರೆಸ್), ಕೆ. ಲತಾ-೩೨೨(ಬಿಜೆಪಿ), ಶಾಂತಿ ಎಸ್.ಪಿ ಮೋಹನ್‌ರಾವ್-೭೫೧(ಜೆಡಿಎಸ್), ಗಂಗಮ್ಮ-೩೯(ಪಕ್ಷೇತರ), ಸಿ.ಆರ್ ರಾಜೇಶ್ವರಿ-೧೪೩(ಪಕ್ಷೇತರ) ಮತ್ತು ಎಸ್. ವೇದಾ-೪೧(ಪಕ್ಷೇತರ) ಹಾಗು ೧೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೩:
 ಬಿ.ಆರ್ ಉಮೇಶ್-೪೪೪(ಜೆಡಿಎಸ್), ಜಾರ್ಜ್-೧೧೧೭(ಕಾಂಗ್ರೆಸ್), ನಕುಲ್ ಜೆ ರೇವಣಕರ್-೪೮೭(ಬಿಜೆಪಿ), ಕುಮಾರಿ-೧೦(ಪಕ್ಷೇತರ), ಪಿ. ನವೀನ್‌ಕುಮಾರ್-೨೩೪(ಪಕ್ಷೇತರ), ಜಿ.ಎಸ್ ಯೋಗೀಶ್-೫(ಪಕ್ಷೇತರ), ಬಿ. ರಮೇಶ್-೩೩೧(ಪಕ್ಷೇತರ), ರಾಜು-೧೮(ಪಕ್ಷೇತರ), ಬಿ.ಎಸ್ ಸಂತೋಷ್ ‌ಕುಮಾರ್-೮(ಪಕ್ಷೇತರ) ಹಾಗು ೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾಡ್ ನಂ.೪:
 ಅನುಪಮಾ ಚನ್ನೇಶ್-೧೧೭೮(ಬಿಜೆಪಿ), ಆರ್. ಉಷಾ-೮೨(ಜೆಡಿಎಸ್), ಎಚ್. ವಿದ್ಯಾ-೧೦೦೧(ಕಾಂಗ್ರೆಸ್), ಗೀತಾ ಎಂ. ಬಸವಕುಮಾರ್-೧೧(ಎಎಪಿ), ವಿ. ನಂದಿನಿ-೨೩(ಪಕ್ಷೇತರ), ಪಿ. ಪುಷ್ಪ-೧೮(ಪಕ್ಷೇತರ) ಹಾಗು ನೋಟಾ ೧೧ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೫:
   ತಬಸುಮ್ ಸುಲ್ತಾನ್(ಖಾನ್ ಸಾಬ್)-೭೭೩(ಜೆಡಿಎಸ್), ರೇಣುಕಾ ರೇವಣ್ಣ-೭೪೩(ಕಾಂಗ್ರೆಸ್), ಬಿ. ಶಶಿಕಲಾ-೮೧೨(ಬಿಜೆಪಿ), ನಸೀಮಾ ಖಾನಂ-೧೧೩(ಎಸ್‌ಡಿಪಿಐ), ರೇಷ್ಮಬಾನು-೨೭(ಎಎಪಿ), ಸುಲ್ತಾನ ಬಾನು-೨೧(ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ) ಹಾಗು ನೋಟಾ ೫ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೬:
    ಚನ್ನಪ್ಪ-೮೪೧(ಜೆಡಿಎಸ್), ಶ್ರೇಯಸ್ ಆರ್(ಚಿಟ್ಟೆ)-೯೧೪(ಕಾಂಗ್ರೆಸ್), ಕೆ.ಆರ್ ಸತೀಶ್-೨೪೩(ಬಿಜೆಪಿ), ಸುಕನ್ಯ-೧೩೩(ಪಕ್ಷೇತರ) ಹಾಗು ೧೨ ನೋಟಾ ಮತಗಳು ಚಲಾವಣೆಗೊಂಡಿವೆ.  ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೭:
  ಬಿ.ಎಂ ಮಂಜುನಾಥ(ಟೀಕು)-೧೧೭೨(ಕಾಂಗ್ರೆಸ್), ಜೆ. ಮೂರ್ತಿ-೫೯(ಬಿಜೆಪಿ), ರೇಣುಕಾ ಶಿವರಾಜ್-೧೯೦(ಜೆಡಿಎಸ್), ದೇವೇಂದ್ರ ಪಾಟೀಲ್-೪೧೩(ಎಸ್‌ಡಿಪಿಐ) ಹಾಗು ನೋಟಾ ೧೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
          ವಾರ್ಡ್ ನಂ.೮:
 ಅಮೀರ್‌ಪಾಷ-೫೩(ಬಿಜೆಪಿ), ಬಷೀರ್ ಅಹಮದ್-೧೨೪೦(ಕಾಂಗ್ರೆಸ್), ಸೈಯದ್ ಅಜ್ಮಲ್-೧೦೯೦(ಜೆಡಿಎಸ್), ಅಬ್ದುಲ್ ಖದೀರ್-೫೯(ಎಎಪಿ), ಅಬುಲ್ ಖೈರ್-೨೭೮(ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ), ಅರ್ಶದುಲ್ಲಾ-೧೮೪(ಎಸ್‌ಡಿಪಿಐ), ಮಹಮ್ಮದ್ ಅಜ್ಲರ್-೩೫(ಆಲ್ ಇಂಡಿಯಾ ಮಜ್ಲಿಸೇ ಇತೇಹಾದುಲ್ ಮುಸ್ಲಿಮಿನ್), ಅಬ್ದುಲ್ ಸುಬಾನ್-೨೦(ಪಕ್ಷೇತರ), ಮಲ್ಲೇಶಿ-೩೫೭(ಪಕ್ಷೇತರ), ಮಹಮದ್ ಇನಾಯತ್-೫೩೪(ಪಕ್ಷೇತರ), ವಿ. ವಿನಯ-೩೬(ಪಕ್ಷೇತರ) ಹಾಗು ನೋಟಾ ೧೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
        ವಾರ್ಡ್ ನಂ.೯:
    ಟಿ. ಗಿರೀಶ್-೧೦೦(ಬಿಜೆಪಿ), ಚನ್ನಪ್ಪ-೧೩೪೭(ಕಾಂಗ್ರೆಸ್), ಪಿ. ಸುಂದರಮೂರ್ತಿ-೭೭೮(ಜೆಡಿಎಸ್) ಹಾಗು ೧೭ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೧೦:
ಅನಿತ ಮಲ್ಲೇಶ್-೧೧೫೧(ಬಿಜೆಪಿ), ಎಂ.ಜಯಂತಿ-೫೦(ಜೆಡಿಎಸ್), ಆರ್. ಶಶಿಕಲಾ-೮೬೧(ಕಾಂಗ್ರೆಸ್) ಮತ್ತು ೨೧ ನೋಟಾ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೧೧:
   ಜಿ. ಧರ್ಮಪ್ರಸಾದ್-೭೭೭(ಬಿಜೆಪಿ), ಎ. ಪಚೈಯ್ಯಪ್ಪನ್-೫೫(ಜೆಡಿಎಸ್), ಎಂ. ಮಣಿ-೯೧೩(ಕಾಂಗ್ರೆಸ್), ಎಂ. ಮದನ್‌ಕುಮಾರ್-೧೯(ಪಕ್ಷೇತರ) ಮತ್ತು ಮಹಮ್ಮದ್ ರಫೀಕ್-೭೪(ಪಕ್ಷೇತರ) ಹಾಗು ನೋಟಾ ೧೩ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೧೨:
 ಕೆ. ಸುದೀಪ್ ಕುಮಾರ್-೧೩೦೫(ಕಾಂಗ್ರೆಸ್), ಎಂ. ಪ್ರಭಾಕರ್-೮೯೪(ಬಿಜೆಪಿ) ಮತ್ತು ಎ. ಪಶುಪತಿ-೧೧೭(ಜೆಡಿಎಸ್) ಹಾಗು ನೋಟಾ ೨೦ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೧೩:
  ಅನುಸುಧಾ ಮೋಹನ್ ಪಳನಿ-೧೩೨೯(ಕಾಂಗ್ರೆಸ್), ಸುನಿತಾ ಮೋಹನ್-೪೬೫(ಬಿಜೆಪಿ), ಕೆ. ಸುಜಾತ-೪೧೪(ಜೆಡಿಎಸ್) ಹಾಗು ನೋಟಾ ೩೫ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೧೪:
 ಬಿ.ಟಿ ನಾಗರಾಜ್-೧೧೫೦(ಕಾಂಗ್ರೆಸ್), ಜಿ. ಆನಂದಕುಮಾರ್-೬೫೨(ಬಿಜೆಪಿ), ಎಚ್. ಮಂಜುನಾಥ್-೩೫೩(ಜೆಡಿಎಸ್), ಪಿ. ಈಶ್ವರ್‌ರಾವ್-೧೩(ಜೆಡಿಎಸ್), ಶೋಭಾ ರವಿಕುಮಾರ್-೧೨(ಪಕ್ಷೇತರ) ಹಾಗು ನೋಟಾ ೧೦ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೧೫:
   ಮಂಜುಳ ಸುಬ್ಬಣ್ಣ-೧೧೮೯(ಜೆಡಿಎಸ್), ಸುಮಾ ವಿ. ಹನುಮಂತಪ್ಪ-೯೭೨(ಕಾಂಗ್ರೆಸ್), ಕಲಾವತಿ ನಾರಾಯಣಪ್ಪ-೪೯೯(ಬಿಜೆಪಿ), ಕಾಂತಮ್ಮ-೫೧(ಪಕ್ಷೇತರ) ಹಾಗು ನೋಟಾ ೨೭ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೧೬:
   ವಿ. ಕದಿರೇಶ್-೯೭೭(ಬಿಜೆಪಿ), ವಿಶಾಲಾಕ್ಷಿ-೮೦೮(ಜೆಡಿಎಸ್), ಪುಟ್ಟೇಗೌಡ-೭೦೩(ಕಾಂಗ್ರೆಸ್), ಬಿ.ಕೆ ಪ್ರತೀಕ್-೪೩(ಪಕ್ಷೇತರ) ಹಾಗು ನೋಟಾ ೧೪ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
          ವಾರ್ಡ್ ನಂ.೧೭:
 ಟಿಪ್ಪು ಸುಲ್ತಾನ್-೧೦೫೨(ಕಾಂಗ್ರೆಸ್), ಎಂ. ಯೋಗೀಶ್-೯೬೧(ಜೆಡಿಎಸ್), ಮುಕ್ರಂಖಾನ್-೧೬೫(ಪಕ್ಷೇತರ), ವಜೀರ್-೧೦೭(ಪಕ್ಷೇತರ) ಹಾಗು ನೋಟಾ ೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೧೮:
 ಮಹಮದ್ ಯೂಸಫ್-೯೧೯(ಕಾಂಗ್ರೆಸ್), ಆರ್. ಕರುಣಾಮೂರ್ತಿ-೭೫೨(ಜೆಡಿಎಸ್), ಸುನಿಲ್‌ಕುಮಾರ್-೧೯೯(ಬಿಜೆಪಿ), ಮಹಮದ್ ಫರ್ವೀಜ್-೨೦೨(ಎಎಪಿ), ಮಹಮದ್ ಆದಿಲ್-೪೮(ಎಐಎಂಐಎಂ) ಹಾಗು ನೋಟಾ ೧೫ ಮತಗಳು ಚಲಾವಣೆಗೊಂಡಿವೆ.
       ವಾರ್ಡ್ ನಂ.೧೯:
   ಎಸ್.ಎನ್ ನಾಗಮಣಿ-೧೭೪(ಬಿಜೆಪಿ), ಬಸವರಾಜ ಬಿ-೩೭೧, ಆರ್. ಸುಮಿತ್ರ-೨೮೩(ಕಾಂಗ್ರೆಸ್), ಟಿ.ಎನ್ ಹಾಲೇಶ್-೬೭(ಪಕ್ಷೇತರ) ಹಾಗು ನೋಟಾ ೬ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೦:
   ಎಸ್. ಜಯಶೀಲ-೯೮೨(ಜೆಡಿಎಸ್), ಎಸ್. ರೀಟಾ-೧೧೧(ಬಿಜೆಪಿ), ಎಸ್. ಲಕ್ಷ್ಮೀದೇವಿ-೯೨೯(ಕಾಂಗ್ರೆಸ್), ಎಚ್.ಕೆ ಮೈತ್ರಿ-೭೮(ಎಎಪಿ), ಆರ್. ವರಲಕ್ಷ್ಮೀ-೪೦(ಪಕ್ಷೇತರ) ಹಾಗು ೧೯ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೨೧:
   ಅನುಷ-೧೭೬(ಬಿಜೆಪಿ), ಜೆ. ರಮ್ಯ-೩೮೬(ಕಾಂಗ್ರೆಸ್), ವಿಜಯ-೧೨೮೦(ಜೆಡಿಎಸ್) ಮತ್ತು ನೋಟಾ ೩೦ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
            ವಾರ್ಡ್ ನಂ.೨೨:
 ಬೋರೇಗೌಡ-೬೯೫(ಜೆಡಿಎಸ್), ಬಿ.ಸಿ ಭರತ್‌ರಾವ್-೧೫೭(ಬಿಜೆಪಿ), ಬಿ.ಕೆ ಮೋಹನ್-೧೩೨೮(ಕಾಂಗ್ರೆಸ್), ಆನಂದರಾವ್-೪೬(ಪಕ್ಷೇತರ) ಹಾಗು ೨೫ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೨೩:
    ಕೆ.ಪಿ ಪ್ರೇಮ-೧೧೯೨(ಜೆಡಿಎಸ್), ಯಶೋದಾಬಾಯಿ-೧೧೪೯(ಕಾಂಗ್ರೆಸ್), ಸುಮ-೩೯(ಬಿಜೆಪಿ), ಬಿ.ಜೆ ನೇತ್ರಾವತಿ-೨೬(ಪಕ್ಷೇತರ), ಎಂ.ಬಿ ಶಾಲಿನಿ-೨೧ ಹಾಗು ನೋಟಾ ೪ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಕೆ.ಪಿ ಪ್ರೇಮ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೪:
  ಎಸ್.ಎಂ ಅಬ್ದುಲ್ ಮಜೀದ್-೫೮೪(ಕಾಂಗ್ರೆಸ್), ಕೋಟೇಶ್ವರ ರಾವ್-೧೧೨೩(ಜೆಡಿಎಸ್), ಪಿ. ಗಣೇಶ್‌ರಾವ್-೧೫೪(ಬಿಜೆಪಿ), ಎ. ಮಸ್ತಾನ್-೯೫(ಎಎಪಿ), ಖಲೀಮ ಉಲ್ಲಾ ಖಾನ್-೧೩(ಪಕ್ಷೇತರ), ಖಾಜಾ ಮೈನುದ್ದೀನ್-೬೭(ಪಕ್ಷೇತರ), ಬಿ.ಪಿ ಚಂದ್ರಶೇಖರ್-೧೧(ಪಕ್ಷೇತರ), ಎಂ. ವೀಣಾ-೪೬(ಪಕ್ಷೇತರ), ಶೇಖ್ ಹುಸೇನ್ ಸಾಬ್-೩೦೫(ಪಕ್ಷೇತರ) ಹಾಗು  ನೋಟಾ ೧೮ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೨೫:
  ಆಂಜನಪ್ಪ-೬೬೧(ಕಾಂಗ್ರೆಸ್), ಕೆ. ಉದಯ್‌ಕುಮಾರ್-೧೧೩೯(ಜೆಡಿಎಸ್), ಕೆ. ಚಂದ್ರು-೨೦೫, ಆರ್. ವೆಂಕಟೇಶ್-೨೯(ಪಕ್ಷೇತರ), ಪೇಪರ್ ಸುರೇಶ್-೪೮೩(ಪಕ್ಷೇತರ) ಹಾಗು ನೋಟಾ ೨೦ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೬:
   ಜಿ. ನಾಗಲಕ್ಷ್ಮೀ-೨೫೦, ಪರಮೇಶ್ವರಿ-೫೨೩(ಜೆಡಿಎಸ್), ಸರ್ವಮಂಗಳ ಭೈರಪ್ಪ-೬೩೭(ಕಾಂಗ್ರೆಸ್), ಎನ್. ಶಿಲ್ಪಾ-೩೧(ಎಎಪಿ), ಜೀವಾ-೭(ಪಕ್ಷೇತರ), ರೇಷ್ಮಾ ಸುಧೀಂದ್ರ-೮೭(ಪಕ್ಷೇತರ), ಎಸ್. ಸರಸ್ವತಮ್ಮ-೧೦೮(ಪಕ್ಷೇತರ) ಹಾಗು ನೋಟಾ ೧೭ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೭:
   ರೂಪಾವತಿ-೯೯೯(ಜೆಡಿಎಸ್), ಲಕ್ಷ್ಮೀ ವೇಲು-೯೨೯(ಕಾಂಗ್ರೆಸ್), ಎನ್ ಶೈಲ ರವಿಕುಮಾರ್-೬೧(ಬಿಜೆಪಿ), ಮಹಾಲಕ್ಷ್ಮೀ-೬೭(ಪಕ್ಷೇತರ) ಮತ್ತು ಶೋಭ ಪ್ರಭಾಕರ್-೨೧೭(ಪಕ್ಷೇತರ) ಹಾಗು ೧೮ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
           ವಾರ್ಡ್ ನಂ.೨೮:
 ಕಾಂತರಾಜ್-೮೮೫(ಕಾಂಗ್ರೆಸ್), ಎ.ಈ ಶಿವಕುಮಾರ್-೬೯(ಬಿಜೆಪಿ), ಎಚ್. ಸಂತೋಷ್-೨೮೬(ಜೆಡಿಎಸ್), ಜಿ. ಶ್ರೀಧರ ಮೂರ್ತಿ-೩(ಪಕ್ಷೇತರ) ಹಾಗು ೧೦ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೩೦:
 ಎಂ.ಎಲ್  ರಾಮಕೃಷ್ಣ-೨೦೨(ಬಿಜೆಪಿ), ಸೈಯದ್ ರಿಯಾಜ್-೧೩೨೯(ಕಾಂಗ್ರೆಸ್), ಜೆ. ಸೋಮಶೇಖರ್-೧೨೬೫(ಜೆಡಿಎಸ್), ಎಸ್.ಎಸ್ ನೀಲಕಂಠಪ್ಪ-೧೯(ಪಕ್ಷೇತರ), ರಂಜಿತ್-೫೫ ಹಾಗು ೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
          ವಾರ್ಡ್ ನಂ.೩೧:
 ಪಲ್ಲವಿ(ದಿಲೀಪ)-೧೩೩೫(ಜೆಡಿಎಸ್), ಬಿ.ಎಂ ಮಂಜುಳ-೬೯(ಬಿಜೆಪಿ), ವೀಣಾ ಲಕ್ಷ್ಮಣ-೧೦೧೭(ಕಾಂಗ್ರೆಸ್), ಜಯಮ್ಮ ಲಕ್ಷ್ಮಣ-೨೩ ಹಾಗು ನೋಟಾ ೨೬ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
               ವಾರ್ಡ್ ನಂ.೩೨:
  ಎಸ್.ಆರ್ ಲತಾ-೯೫೫(ಕಾಂಗ್ರೆಸ್), ಸರಸ್ವಮ್ಮ ಕೆ-೨೪೭(ಬಿಜೆಪಿ), ಸವಿತಾ ಉಮೇಶ್-೧೧೧೪(ಜೆಡಿಎಸ್), ದಿವ್ಯಶ್ರೀ ಶಶಿಕುಮಾರ್ ಗೌಡ-೪೪(ಪಕ್ಷೇತರ), ಬಿ. ಲತಾ-೪೭(ಪಕ್ಷೇತರ) ಹಾಗು ನೋಟಾ ೩೪ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೩೩:
  ಬಿ.ವಿ ಕೃಷ್ಣರಾಜ್-೪೦೫(ಕಾಂಗ್ರೆಸ್), ಎಚ್.ಬಿ ರವಿಕುಮಾರ್-೪೨೯(ಜೆಡಿಎಸ್), ಶ್ರೀಧರ ಗೌಡ-೧೭೧(ಬಿಜೆಪಿ), ಆರ್. ಮೋಹನ್‌ಕುಮಾರ್-೫೩೩(ಪಕ್ಷೇತರ), ಎನ್. ಸಂತೋಷ್‌ಕುಮಾರ್-೧೦(ಪಕ್ಷೇತರ), ಎಂ.ಎಸ್ ಸುಧಾಮಣಿ-೯೧(ಪಕ್ಷೇತರ) ಹಾಗು ನೋಟಾ ೧೩ ಮತಗಳು ಚಲಾವಣೆಗೊಂಡಿವೆ. ಪಕ್ಷೇತರ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.  
        ವಾರ್ಡ್ ನಂ.೩೪:
   ಭಾಗ್ಯಮ್ಮ ಮಂಜುನಾಥ್-೮೮೫(ಜೆಡಿಎಸ್), ಲತಾ ಚಂದ್ರಶೇಖರ್-೧೦೩೫(ಕಾಂಗ್ರೆಸ್), ಶ್ಯಾಮಲ ಸತ್ಯಣ್ಣ-೩೩೦(ಬಿಜೆಪಿ) ಮತ್ತು ಪುಟ್ಟ ಲಿಂಗಮ್ಮ-೭೧(ಪಕ್ಷೇತರ) ಹಾಗು ನೋಟಾ ೨೮ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
        ವಾರ್ಡ್ ನಂ.೩೫:
 ನಿಂಗಮ್ಮ-೯೪೫(ಜೆಡಿಎಸ್), ಲಕ್ಷ್ಮಮ್ಮ ನರಸೇಗೌಡ-೧೨೧(ಬಿಜೆಪಿ), ಶೃತಿ ಸಿ. ವಸಂತಕುಮಾರ್-೧೦೨೨(ಕಾಂಗ್ರೆಸ್), ಕೆ. ಅನ್ನಪೂರ್ಣ ವೆಂಕಟಾಚಲ-೧೦೫(ಪಕ್ಷೇತರ) ಮತ್ತು ಸುಧಾ ಶಿವಪ್ಪ-೨೩(ಪಕ್ಷೇತರ) ಹಾಗು ನೋಟಾ ೧೭ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.