![](https://blogger.googleusercontent.com/img/a/AVvXsEi91xacukIqruiddt-10dOr9jW5rmOilo5mbLDBJjszzL5_0sJqjIm00Bk5hAEPTF--nU78YJ5q1TK-GXi89BtGQHmcx5NiS7f9Bx4h3YPzWCPS-O-y2h4ZDR8KVpfGzCngzAfwoJ2ZAfk_cqQsCVk4242qrHR_m20RyB5bp_mO5qQR_DVXXZhbiJys1b9x=w310-h400-rw)
ಭದ್ರಾವತಿ ಹೊಸಮನೆ ಬಜರಂಗದಳ ಓಂ ಹಿಂದೂ ಕೋಟೆ ವತಿಯಿಂದ ೯ನೇ ವರ್ಷದ ವಿನಾಯಕ ಮೂರ್ತಿ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಶಿರಡಿ ಸಾಯಿ ಬಾಬಾ ವೇಷಧಾರಿಯಾಗಿ ಮೂರ್ತಿ.
ಭದ್ರಾವತಿ: ನಗರದ ಪ್ರಮುಖ ವಿನಾಯಕ ಸೇವಾ ಸಮಿತಿಗಳಲ್ಲಿ ಒಂದಾಗಿರುವ ಹೊಸಮನೆ ಬಜರಂಗದಳ ಓಂ ಹಿಂದೂ ಕೋಟೆ ವತಿಯಿಂದ ೯ನೇ ವರ್ಷದ ವಿನಾಯಕ ಮೂರ್ತಿ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿ ವಿಸರ್ಜನೆ ಅ.೮ರಂದು ನಡೆಯಲಿದೆ.
ಪ್ರತಿ ವರ್ಷ ವಿಶೇಷವಾದ ಹಾಗು ಆಕರ್ಷಕವಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶಿರಡಿ ಸಾಯಿ ಬಾಬಾ ವೇಷಧಾರಿಯಾಗಿ ಮೂರ್ತಿ ಕಂಗೊಳಿಸುತ್ತಿದ್ದು, ಈ ಮೂರ್ತಿಯನ್ನು ನಗರದ ಹಿರಿಯ ಶಿಲ್ಪಿ ಜಯರಾಮ್ ತಯಾರಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿಶೇಷ ದಾನಿಗಳಾಗಿದ್ದು, ತುಮಕೂರು ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗು ನಗರದ ಅನ್ನದಾತ ಸರ್.ಎಂ ವಿಶ್ವೇಶ್ವರಾಯ ಅವರ ಸವಿನೆನಪಿನಲ್ಲಿ ಮಹೋತ್ಸವ ನಡೆಯುತ್ತಿದ್ದು, ವಿವಿಧ ಧಾರ್ಮಿಕ ಆಚರಣೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇದೀಗ ಮೂರ್ತಿ ವಿಸರ್ಜನೆಗೆ ಬರದ ಸಿದ್ದತೆಗಳು ನಡೆದಿವೆ. ಇದಕ್ಕೂ ಮೊದಲು ಬೆಳಿಗ್ಗೆ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ.
ಮೀನುಗಾರರ ಬೀದಿ ಗಣಪತಿ:
ನಗರದ ಬಿ.ಎಚ್ ರಸ್ತೆ, ದುರ್ಗಾ ನರ್ಸಿಂಗ್ ಹೋಂ ಬಳಿ ಮೀನುಗಾರರ ಬೀದಿಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಆಕರ್ಷಕವಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅ.೮ರಂದು ಮೂರ್ತಿ ವಿಸರ್ಜನೆ ನಡೆಯಲಿದೆ.
ವಿನಾಯಕ ಗರುಡನ ಮೇಲೆ ಕುಳಿತು ಬಿಲ್ಲು ಬಾಣ ಹಿಡಿದು ರಾಕ್ಷಸ ಸಂಹಾರದಲ್ಲಿ ತೊಡಗಿರುವುದು ಭಕ್ತರ ಗಮನ ಸೆಳೆಯುತ್ತಿದೆ. ಶನಿವಾರ ಹೋಮ-ಹವನ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ ಬಿ.ಎಚ್ ರಸ್ತೆ, ದುರ್ಗಾ ನರ್ಸಿಂಗ್ ಹೋಂ ಬಳಿ ಮೀನುಗಾರರ ಬೀದಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಗರುಡನ ಮೇಲೆ ಕುಳಿತು ಬಿಲ್ಲು ಬಾಣ ಹಿಡಿದು ರಾಕ್ಷಸ ಸಂಹಾರದಲ್ಲಿ ತೊಡಗಿರುವುದು ಭಕ್ತರ ಗಮನ ಸೆಳೆಯುತ್ತಿದೆ.
ಅಂಬೇಡ್ಕರ್ ನಗರ ಗಣಪತಿ:
ನಗರದ ಬಿ.ಎಚ್ ರಸ್ತೆ ಅಂಡರ್ ಬಿಡ್ಜ್ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ನಗರದ ವಿನಾಯಕ ಸೇವಾ ಸಮಿತಿ ವತಿಯಿಂದ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದ್ದು, ಅ.೮ರಂದು ಮೂರ್ತಿ ವಿಸರ್ಜನೆ ನಡೆಯಲಿದೆ.
ಶನಿವಾರ ವಿಶೇಷ ಪೂಜೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.