Tuesday, May 12, 2020

ಶತಾಯುಷಿ ಬಾಬುನಾಯ್ಕ್ ನಿಧನ

ಶತಾಯುಷಿ ಬಾಬುನಾಯ್ಕ್ 
ಭದ್ರಾವತಿ, ಮೇ. ೧೨: ತಾಲೂಕಿನ ಕಲ್ಪನಹಳ್ಳಿ ತಾಂಡ ನಿವಾಸಿ ಶಿಕ್ಷಕ ಜುಂಜ್ಯಾನಾಯ್ಕರವರ, ಶತಾಯುಷಿ ಬಾಬುನಾಯ್ಕ್(೧೦೬) ಮಂಗಳವಾರ ವಯೋ ಸಹಜ ನಿಧನ ಹೊಂದಿದರು.
ತಾಂಡದಲ್ಲಿ ಹಿರಿಯರಾಗಿದ್ದ ಬಾಬುನಾಯ್ಕ್‌ರವರು ಜಮೀನ್ದಾರ್‌ರಾಗಿ ಗುರುತಿಸಿಕೊಂಡಿದ್ದರು. ೪ ಗಂಡು, ೩ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ನಿಧನಕ್ಕೆ ಬಂಜಾರ ಸಮಾಜದ ಮುಖಂಡರು, ದಲಿತ ಮುಖಂಡರು, ಶಿಕ್ಷಕ ವೃಂದದವರು ಹಾಗೂ ತಾಂಡ ನಿವಾಸಿಗಳು ಸಂತಾಪ ಸೂಚಿಸಿದ್ದಾರೆ. 

No comments:

Post a Comment