Sunday, May 31, 2020

ಹೆಬ್ಬಾವು ಸೆರೆ ಹಿಡಿದ ಆಂಜನೇಯ ಆಗ್ರಹಾರದ ಯುವಕರು

ಭದ್ರಾವತಿ ತಾಲೂಕಿನ ಅಂತರಗಂಗೆ ಕ್ಯಾಂಪ್ ಮನೆಯೊಂದರಲ್ಲಿ ಸೇರಿಕೊಂಡಿದ್ದ ಸುಮಾರು ೫ ಅಡಿ ಉದ್ದದ, ೨೦ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ನಗರಸಭೆ ವ್ಯಾಪ್ತಿಯ ಆಂಜನೇಯ ಅಗ್ರಹಾರದ ಯುವಕರು ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಮೇ. ೩೧: ತಾಲೂಕಿನ ಅಂತರಗಂಗೆ ಕ್ಯಾಂಪ್ ಮನೆಯೊಂದರಲ್ಲಿ ಸೇರಿಕೊಂಡಿದ್ದ ಸುಮಾರು ೫ ಅಡಿ ಉದ್ದದ, ೨೦ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ನಗರಸಭೆ ವ್ಯಾಪ್ತಿಯ ಆಂಜನೇಯ ಅಗ್ರಹಾರದ ಯುವಕರು ಯಶಸ್ವಿಯಾಗಿದ್ದಾರೆ. 
ಹೆಬ್ಬಾವು ಇರುವ ಮಾಹಿತಿ ತಿಳಿದ ತಕ್ಷಣ ಅಂತರಗಂಗೆ ಕ್ಯಾಂಪ್‌ಗೆ ತೆರಳಿದ ಮಂಜ(ಕುಯ್), ಶರತ್, ಮದನ್ ಸೇರಿದಂತೆ ಇನ್ನಿತರ ಯುವಕರು ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೂ ವಿವಿಧ ಜಾತಿಯ ಸುಮಾರು ೨೫೦ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ ಎಂದು ಮಂಜ ಪತ್ರಿಕೆಗೆ ತಿಳಿಸಿದರು. 

No comments:

Post a Comment