ಭದ್ರಾವತಿ: ತಾಲೂಕಿನ ಅರಳಿಕೊಪ್ಪ ಗ್ರಾಮದ ಕಿರಣಿ ಅಂಗಡಿಯೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.
ಕಿರಣಿ ಅಂಗಡಿ ಮಾಲೀಕ ಮಹಾದೇವಪ್ಪ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ವಿಂಡ್ಸರ್ ೧೧ ಪೌಚ್, ಚಾಯ್ಸ್ ೧೧ ಪೌಚ್, ಓರಿಜಿನಲ್ ಚಾಯ್ಸ್ ೫೧ ಪೌಚ್ ಸೇರಿದಂತೆ ಒಟ್ಟು ೨,೨೦೦ ರು. ಮೌಲ್ಯದ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾದೇವಪ್ಪ ತಲೆ ಮರೆಸಿಕೊಂಡಿದ್ದು, ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕಿರಣಿ ಅಂಗಡಿ ಮಾಲೀಕ ಮಹಾದೇವಪ್ಪ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ವಿಂಡ್ಸರ್ ೧೧ ಪೌಚ್, ಚಾಯ್ಸ್ ೧೧ ಪೌಚ್, ಓರಿಜಿನಲ್ ಚಾಯ್ಸ್ ೫೧ ಪೌಚ್ ಸೇರಿದಂತೆ ಒಟ್ಟು ೨,೨೦೦ ರು. ಮೌಲ್ಯದ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾದೇವಪ್ಪ ತಲೆ ಮರೆಸಿಕೊಂಡಿದ್ದು, ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.
No comments:
Post a Comment