Sunday, July 19, 2020

ಮನೆ ಕಳ್ಳತನ : ಚಿನ್ನಾಭರಣ, ನಗದು ಕಳವು

ಭದ್ರಾವತಿ, ಜು. ೧೯: ನಗರದ ನ್ಯೂ ಕಾಲೋನಿಯಲ್ಲಿ ಮನೆಯೊಂದರ ಬೀರುವಿನ ಬೀಗ ಮುರಿದು ನಗದು, ಚಿನ್ನಾಭರಣ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ಐಡಿಕೆ ೩೦/ಬಿ ವಸತಿ ಗೃಹದ ನಿವಾಸಿ ರಜೀಯಾ ಫರ್ವೀನ್ ಎಂಬುವರು ಜು.೧೧ರಂದು ಶಿವಮೊಗ್ಗದಲ್ಲಿರುವ ಮಗಳ ಮನೆಗೆ ತೆರಳಿದ್ದು, ಪುನಃ ಜು.೧೮ರಂದು ಹಿಂದಿರುಗಿದ್ದಾರೆ. ಈ ಅವಧಿಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಕಿಟಕಿಯ ಮೂಲಕ ಒಳ ಪ್ರವೇಶಿಸಿ ಬೀರುವಿನ ಬೀಗ ಮುರಿಯಲಾಗಿದೆ. ಬೀರುವಿನಲ್ಲಿದ್ದ ಸುಮಾರು ೧೮ ಗ್ರಾಂ. ತೂಕದ ೩೬ ಸಾವಿರ ರು. ಮೌಲ್ಯದ ಒಂದು ಜೊತೆ ಬಂಗಾರದ ಬಳೆ, ೭ ಗ್ರಾಂ. ತೂಕದ ೧೪ ಸಾವಿರ ರು. ಮೌಲ್ಯದ ಬಂಗಾರದ ಸರ ಹಾಗೂ ೨೫ ಸಾವಿರ ರು. ನಗದು ಹಣ ಕಳವು ಮಾಡಲಾಗಿದೆ. 
ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

No comments:

Post a Comment