Thursday, July 30, 2020

ಕೊರೋನಾ ಸೋಂಕು : ನಗರಸಭೆ ವ್ಯಾಪ್ತಿಯಲ್ಲಿ ಒಂದೇ ದಿನ ೧೦ ಪ್ರಕರಣ

ಭದ್ರಾವತಿ, ಜು. ೩೦:  ಉಕ್ಕಿನ ನಗರದಲ್ಲಿ ಕೆಲವು ದಿನಗಳಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ ನಗರಸಭೆ ವ್ಯಾಪ್ತಿಯಲ್ಲಿ ೧೦ ಪ್ರಕರಣಗಳು ದಾಖಲಾಗಿವೆ. 
  ವೇಲೂರ್‌ಶೆಡ್‌ನಲ್ಲಿ ೧೯ ಮತ್ತು ೨೩ ವರ್ಷದ ಇಬ್ಬರು ಯುವಕರಿಗೆ, ಅರಣ್ಯ ಕಛೇರಿ ಬಳಿ ೩೦ ವರ್ಷದ ಯುವಕ ಮತ್ತು ೬೫ ವರ್ಷದ ವ್ಯಕ್ತಿಗೆ, ಚಾಮೇಗೌಡ ಏರಿಯಾದಲ್ಲಿ ೨೭ ವರ್ಷದ ಮಗಳು ಹಾಗೂ ೬೨ ವರ್ಷದ ತಂದೆಗೆ, ಜೈಭೀಮಾ ನಗರದಲ್ಲಿ ೨೬ ವರ್ಷದ ವ್ಯಕ್ತಿಗೆ, ಭೋವಿಕಾಲೋನಿಯಲ್ಲಿ ೫೫ ವರ್ಷದ ಗುತ್ತಿಗೆದಾರನಿಗೆ ಮತ್ತು ೪೦ ವರ್ಷದ ಮಹಿಳೆಗೆ ಹಾಗೂ ನೃಪತುಂಗ ನಗರದಲ್ಲಿ ೬೦ ವರ್ಷದ ಮಹಿಳೆಗೆ ಸೋಂಕು ತಗುಲಿದೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷರಾದ ಲತಾಮಣಿ, ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 
 

No comments:

Post a Comment