Wednesday, July 22, 2020

ಕಸಾಪ ವತಿಯಿಂದ ಆನ್‌ಲೈನ್ ಮುಖಾಂತರ ಗಾಯನ ಸ್ಪರ್ಧೆ

ಭದ್ರಾವತಿ, ಜು. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೊದಲ ಬಾರಿಗೆ ಆನ್‌ಲೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ೭೪ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶ ಭಕ್ತಿಗೀತೆಗಳ(ತಾಳ, ಪರಿಕರಗಳು, ಕೊರೋಕಿ) ಇಲ್ಲದೆ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. 
೧೪ ವರ್ಷದೊಳಗಿನ ಕಿರಿಯರ ಮತ್ತು ೧೫ ವರ್ಷ ಮೇಲ್ಪಟ್ಟ ಹಿರಿಯರ ಎರಡು ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ೩ ರಿಂದ ೪ ನಿಮಿಷದ ಗಾಯನದ ವಿಡಿಯೋ ಮಾಡಿ ಕಳಿಸಿಕೊಡಬೇಕು. ವಿಡಿಯೋ ಮಾಡುವಾಗ ಮೊದಲು ಸ್ಪರ್ಧಿಯ ಹೆಸರು, ವಿಳಾಸ ತಿಳಿಸಬೇಕು. ಗಾಯನದ ವಿಡಿಯೋ ಕ್ಲಿಪ್ ಮೊ: ೯೭೩೧೧೫೭೭೯೩ ಅಥವಾ ೯೪೪೯೯೫೧೩೦೦ ವಾಟ್ಸ್‌ಆಪ್ ನಂಬರ್‌ಗೆ ಜು.೩೦, ಸಂಜೆ ೫ ಗಂಟೆಯೊಳಗೆ ಕಳಿಸಿ ಕೊಡಬೇಕು. 
ವಿಜೇತರಾದ ಮೊದಲ ಮಂದಿಗೆ ಆ.೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಬಹುಮಾನಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಮೊ: ೯೭೩೧೧೫೭೭೯೩, ಕಾರ್ಯದರ್ಶಿ ಚನ್ನಪ್ಪ, ಮೊ: ೯೪೪೯೯೫೧೩೦೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

No comments:

Post a Comment