ಭದ್ರಾವತಿ, ಜು. ೨೨: ತಾಲೂಕಿನಲ್ಲಿ ಬುಧವಾರ ಪುನಃ ೫ ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಪೈಕಿ ಓರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ಕೆಎಸ್ಆರ್ಟಿಸಿ ನೌಕರ ಸೇರಿದ್ದಾರೆ.
ಹಳೇನಗರದ ಕಂಚಿಬಾಗಿಲು ವೃತ್ತದ ಅಂಬೇಡ್ಕರ್ ನಗರದ ೨೮ ವರ್ಷದ ಪೊಲೀಸ್ ಸಿಬ್ಬಂದಿ ಮತ್ತು ೪೮ ವರ್ಷದ ವ್ಯಕ್ತಿಗೆ, ನ್ಯೂಟೌನ್ ಬೆಣ್ಣೆಕೃಷ್ಣ ಸರ್ಕಲ್ ಬಳಿ ೩೯ ವರ್ಷದ ವ್ಯಕ್ತಿಗೆ, ೫೫ ವರ್ಷದ ಕೆಎಸ್ಆರ್ಟಿಸಿ ನೌಕರನಿಗೆ ಮತ್ತು ಸಿರಿಯೂರು ತಾಂಡದ ೧೫ ವರ್ಷದ ಹುಡುಗನಿಗೆ ಸೋಂಕು ತಗುಲಿದೆ.
ಮಂಗಳವಾರ ೧೦ ಪ್ರಕರಣ ದಾಖಲಾಗಿತ್ತು. ಬುಧವಾರ ೫ಕ್ಕೆ ಇಳಿದಿದ್ದು, ಇತ್ತೀಚೆಗೆ ಗ್ರಾಮೀಣ ಭಾಗದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಜನರು ಸಹ ಆತಂಕಕ್ಕೆ ಒಳಗಾಗುವಂತಾಗಿದೆ.
No comments:
Post a Comment