ಭದ್ರಾವತಿ ತಾಲೂಕಿನ ಅರಕರೆ ಗ್ರಾಮದ ಶ್ರೀ ಚನ್ನವೀರಸ್ವಾಮಿ ಮಠ ವತಿಯಿಂದ ವಿಕಲಚೇತನ ಬಾಲಕನೊಬ್ಬನಿಗೆ ಗಾಲಿ ಕುರ್ಚಿ ವಿತರಿಸಲಾಯಿತು.
ಭದ್ರಾವತಿ, ಜು. ೨೫: ತಾಲೂಕಿನ ಅರಕರೆ ಗ್ರಾಮದ ಶ್ರೀ ಚನ್ನವೀರಸ್ವಾಮಿ ಮಠ ವಿಕಲಚೇತನ ಬಾಲಕನೊಬ್ಬನ ಸಂಕಷ್ಟಕ್ಕೆ ಸ್ಪಂದಿಸಿದೆ.
ಡಿ.ಬಿ ಹಳ್ಳಿ ಗ್ರಾಮದ ತಿಮ್ಮಯ್ಯ ಎಂಬುವರ ಮಗ ಶ್ರೀನಿವಾಸ ಅಂಗ ವೈಕಲ್ಯದಿಂದ ಬಳಲುತ್ತಿದ್ದು, ಈ ಬಾಲಕನ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯವಿರುವ ಗಾಲಿ ಕುರ್ಚಿ ವಿತರಿಸಲಾಯಿತು.
ಮಠದ ಪೀಠಾಧ್ಯಕ್ಷ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅರಕೆರೆ ಭೈರೇಶ್ಕುಮಾರ್ ಹಾಗೂ ಭಕ್ತರು ಉಪಸ್ಥಿತರಿದ್ದರು.
No comments:
Post a Comment