ಭದ್ರಾವತಿ, ಸೆ. ೯: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಯುವಕರನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ.
ಹಳೇನಗರದ ಭೂತನಗುಡಿಯ ಸರ್ಕಾರಿ ಆಸ್ಪತ್ರೆ ಬಳಿ ನಿವಾಸಿ ಇಂಜಿನಿಯರ್ ವಿದ್ಯಾರ್ಥಿ ಶೇಖ್ ಅಬೂಬಕರ್ ಸಿದ್ದಿಕ್(೨೨), ವೆಲ್ಡಿಂಗ್ ಕೆಲಸ ಮಾಡುವ ಜಾಫರ್ ಸಾಧಿಕ್(೨೪), ದುರ್ಗಿ ನಗರದ ನಿವಾಸಿ ಸಾಧಿಕ್ ಪಾಷಾ(೩೧) ಮತ್ತು ಗಾರೆ ಕೆಲಸ ಮಾಡುವ ಮೊಮಿನ್ ಮೊಹಲ್ಲಾ ನಿವಾಸಿ ತೋಫಿಕ್(೨೩) ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.
ಈ ನಾಲ್ವರು ಹೊಳೆಹೊನ್ನೂರು ರಸ್ತೆಗೆ ಸಂಪರ್ಕಗೊಂಡಿರುವ ಹಳೇಸೀಗೆಬಾಗಿ ರಸ್ತೆಯಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಬಂಧಿತರಿಂದ ಸುಮಾರು ೨೦ ಸಾವಿರ ರು. ಮೌಲ್ಯದ ೧ ಕೆ.ಜಿ ೨೫೦ ಗ್ರಾಂ ತೂಕದ ಗಾಂಜಾ ಸೊಪ್ಪು, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರವಾಹನಗಳು ಸೇರಿದಂತೆ ಒಟ್ಟು ೨,೦೫,೦೦೦ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
No comments:
Post a Comment