ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಬಸ್ ನಿಲ್ದಾಣದ ಬಳಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಗ್ರಾಮಸ್ಥರು ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಭದ್ರಾವತಿ, ನ. ೨: ತಾಲೂಕಿನ ಬಾರಂದೂರು ಗ್ರಾಮದ ಬಸ್ ನಿಲ್ದಾಣದ ಬಳಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಗ್ರಾಮಸ್ಥರು ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಧ್ವಜಾರೋಹಣ ನೆರವೇರಿಸಿ ರಾಜರಾಜೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶ್ರೀ ವಿನಾಯಕ ಆಟೋ ಚಾಲಕರ ಹಾಗು ಮಾಲೀಕರ ಸಂಘ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಸುಧಾಕರ್, ಖಜಾಂಚಿ ಕೇಶವ, ಪ್ರಧಾನ ಕಾರ್ಯದರ್ಶಿ ಮಂಜು, ಕಾರ್ಯದರ್ಶಿ ಕುಮಾರ್, ಸಹಕಾರ್ಯದರ್ಶಿಗಳಾದ ಗೋಪಿ, ರಾಕೇಶ್, ಮಂಜು, ಶಿವಲಿಂಗಣ್ಣ, ಸಂದೀಪ, ಪ್ರದೀಪ, ನಾಗ, ಶಂಕರ್, ಸುರೇಶ ಹಾಗೂ ಪ್ರವೀಣ, ಬಿ.ವಿ. ರಮೇಶ್, ವೈದ್ಯ ನರಸಿಂಹ ಭಟ್, ಗುರುಕೃಪಾ ಹೋಟೆಲ್ ಮಾಲೀಕ ಶಿವಣ್ಣ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ಡಾ.ಸಿ.ರಾಮಾಚಾರಿ, ಕರ್ನಾಟಕ ರಕ್ಷಣಾ ಪಡೆ ಹಾವೇರಿ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆಟೋ ಚಾಲಕರು, ಅಂಗಡಿಮುಂಗಟ್ಟುಗಳ ವ್ಯಾಪರಸ್ಥರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment