Saturday, November 7, 2020

ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿ : ಸೈಲ್ ಶೇ.೨೦ರಷ್ಟು ಪ್ರಗತಿ

ಭದ್ರಾವತಿ, ನ. ೭: ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ದ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿಯಂತೆ ಒಟ್ಟಾರೆ ವ್ಯವಹಾರದ ಶೇ.೨೦ರಷ್ಟು ಪ್ರಗತಿ ಸಾಧಿಸಿದೆ ಎಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.
      ಪ್ರಾಧಿಕಾರದ ಅಧೀನಕ್ಕೆ ಒಳಪಟ್ಟ ಕಂಪನಿಗಳ ಒಟ್ಟಾರೆ ವ್ಯವಹಾರದಲ್ಲಿ ಪಿಬಿಟಿ ಲಾಭ ರು. ೬೧೦.೩೨ ಕೋ. ಮತ್ತು ಪಿಎಟಿ ಲಾಭ ರು. ೩೯೩.೩೨ ಕೋ. ಗಳಾಗಿದ್ದು, ಇದೆ ರೀತಿ ಪಿಬಿಟಿ ನಷ್ಟ ರು.೫೨೩.೦೩ ಕೋ. ಮತ್ತು ಪಿಎಟಿ ನಷ್ಟ ರು. ೩೪೨.೮೪ ಕೋ. ಗಳಾಗಿದೆ. ಕಳೆದ ಹಣಕಾಸಿನ ವರ್ಷಕ್ಕೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ ಗಣನೀಯ ಸುಧಾರಣೆ ಕಂಡು ಬಂದಿದ್ದು, ಉಕ್ಕು ಪ್ರಾಧಿಕಾರ ಲಾಭದ ಕಡೆಗೆ ಮುಖಮಾಡಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
   ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ ವರದಿಗೆ ಪ್ರತಿಕ್ರಿಯಿಸಿ, 'ಕೋವಿಡ್-೧೯ರ ಸಂದಭದಲ್ಲಿ ಶೇ.೨೦ರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಉತ್ಪಾದನೆ ಮತ್ತು ಮಾರಾಟದಲ್ಲಿ ಹೆಚ್ಚಳವಾಗಿರುವುದು ಉತ್ತಮ ಅರ್ಥ ವ್ಯವಸ್ಥೆಗೆ ತಮ್ಮ ಕೊಡುಗೆ ತೋರಿಸುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.

No comments:

Post a Comment