ಭದ್ರಾವತಿ, ಡಿ. ೨೯: ನಗರಸಭೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ೪೦೦೦ ಜಿ+೩ ಗುಂಪು ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳು ಮೊದಲನೇ ಕಂತಿನ ಮೊತ್ತ ಜಮಾ ಮಾಡಲು ನಗರಸಭೆ ಕಛೇರಿಯ ಪ್ರತ್ಯೇಕ ಕೌಂಟರ್ನಲ್ಲಿ ಉಳಿತಾಯ ಖಾತೆ ತೆರೆಯಲು ತಾಂತ್ರಿಕ ತೊಂದರೆ ಎದುರಾಗಿದೆ.
ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಡಿ.೨೮ರೊಳಗೆ ಮೊದಲನೇ ಕಂತಿನ ವಂತಿಕೆ ರು.೧೦,೦೦೦ ಜಮಾ ಮಾಡಲು ನಗರಸಭೆ ಕಛೇರಿಯ ಯೂನಿಯನ್ ಬ್ಯಾಂಕ್ ಪ್ರತ್ಯೇಕ ಕೌಂಟರ್ನಲ್ಲಿ ಉಳಿತಾಯ ಖಾತೆ ತೆರೆಯಲು ಈ ಹಿಂದೆ ಆಶ್ರಯ ಸಮಿತಿ ತೀರ್ಮಾನದಂತೆ ಸೂಚಿಸಲಾಗಿತ್ತು. ಪ್ರಸ್ತುತ ತಾಂತ್ರಿಕ ಕಾರಣಗಳಿಂದ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸುವುದಾಗಿ ಪೌರಾಯುಕ್ತರು ಮನೋಹರ್ ತಿಳಿಸಿದ್ದಾರೆ.
No comments:
Post a Comment