ಅಪರಂಜಿ ಶಿವರಾಜ್
ಭದ್ರಾವತಿ, ಡಿ. ೨೬: ಕನ್ನಡ ಅಭಿವೃದ್ಧಿ ಪ್ರಾಧಿಕಾರ ನವಂಬರ್ ೧, ೨೦೨೦ ರಿಂದ ಅಕ್ಟೋಬರ್ ೩೧, ೨೦೨೧ರವರೆಗೆ 'ಕನ್ನಡ ಕಾಯಕ ವರ್ಷ' ಇದರ ಅಂಗವಾಗಿ ಜಾರಿಗೆ ತಂದಿರುವ ಕಾರ್ಯಕ್ರಮದ ಕಾರ್ಯಸೂಚಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಚಿಸಿರುವ ಕನ್ನಡ ಕಾಯಕ ಪಡೆಗೆ ಶಿವಮೊಗ್ಗ ಜಿಲ್ಲೆಯಿಂದ ನಗರದ ಚಲನಚಿತ್ರ ನಟ, ರಂಗ ಕಲಾವಿದ ಅಪರಂಜಿ ಶಿವರಾಜ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಭರಣ ಆದೇಶಹೊರಡಿಸಿದ್ದು, ಪ್ರಥಮ ಹಂತವಾಗಿ ಡಿ.೨೯ರಂದು ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯದ ಎಲ್ಲಾ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆ ಮತ್ತು ಶುದ್ಧ ಕನ್ನಡ ನಾಮಫಲಕ ಅಳವಡಿಕೆ ಅಭಿಯಾನ ಯಶಸ್ವಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸುವಂತೆ ಅಧ್ಯಕ್ಷರು ಅಪರಂಜಿ ಶಿವರಾಜ್ರವರಿಗೆ ಸೂಚಿಸಿದ್ದಾರೆ.
No comments:
Post a Comment