Sunday, December 13, 2020

ಎಂಪಿಎಂ ನಿವೃತ್ತ ನೌಕರರ ಎ. ಜೋಸೆಫ್ ನಿಧನ

ಎ. ಜೋಸೆಫ್
ಭದ್ರಾವತಿ, ಡಿ. ೧೩: ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ಛಾಯಾಗ್ರಾಹಕ ಎ. ಜೋಸೆಫ್(೬೬) ಭಾನುವಾರ ನಿಧನ ಹೊಂದಿದರು.
     ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹೊಂದಿದ್ದರು. ತರುಣ ಭಾರತಿ ವಿದ್ಯಾಸಂಸ್ಥೆ, ವಿಕಸಂ ಕಲಾತಂಡ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ವಿವಿಧ ಸಂಘ ಸಂಸ್ಥೆಗಳು, ಎಂಪಿಎಂ ನಿವೃತ್ತ ನೌಕರರು, ಛಾಯಾಗ್ರಾಹಕರು ಸಂತಾಪ ಸೂಚಿಸಿದ್ದಾರೆ.

No comments:

Post a Comment