Monday, March 22, 2021

ತಾಲೂಕು ಕಛೇರಿಯಲ್ಲಿ ಕೆರೆಗಳ ಹಬ್ಬ ಆಚರಣೆಗೆ ಆರ್. ವೇಣುಗೋಪಾಲ್ ಘೋಷಣೆ

ನಗರಸಭೆ, ತಾಲೂಕು ಆಡಳಿತ ಕಾರ್ಯಕ್ಕೆ ಅಭಿನಂದನೆ


ಭದ್ರಾವತಿ ತಾಲೂಕಿನಾದ್ಯಂತ ಕೆರೆಗಳ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್ ಸೋಮವಾರ ವಿಶ್ವ ಜಲದಿನದ ಅಂಗವಾಗಿ ತಾಲೂಕು ಕಛೇರಿಯಲ್ಲಿ ಕೆರೆಗಳ ಹಬ್ಬ ಆಚರಣೆಗೆ ಘೋಷಿಸಿದರು.
   ಭದ್ರಾವತಿ, ಮಾ. ೨೨: ತಾಲೂಕಿನಾದ್ಯಂತ ಕೆರೆಗಳ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್ ಸೋಮವಾರ ವಿಶ್ವ ಜಲದಿನದ ಅಂಗವಾಗಿ ತಾಲೂಕು ಕಛೇರಿಯಲ್ಲಿ ಕೆರೆಗಳ ಹಬ್ಬ ಆಚರಣೆಗೆ ಘೋಷಿಸಿದರು.
    ಮಾ.೨೯ರಂದು ತಾಲೂಕಿನ ತಿಮ್ಲಾಪುರ ಗ್ರಾಮದ ಸರ್ವೆ ನಂ.೮ ಹಾಗು ಮಾ.೩೦ರಂದು ಸರ್ವೆ ನಂ.೬೪ರ ಕೆರೆ ಹಾಗು ಏ.೧ರಂದು ಉಜ್ಜನಿಪುರ ಗ್ರಾಮದ ಸರ್ವೆ ನಂ.೫೭ರ ಕೆರೆ ಅಳತೆ ಕಾರ್ಯ ಕೈಗೊಂಡು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನಗರಸಭೆ ಆಡಳಿತಕ್ಕೆ ಆದೇಶ ಪತ್ರ ವಿತರಿಸಿದ ಸಂದರ್ಭದಲ್ಲಿ ಆರ್. ವೇಣುಗೋಪಾಲ್ ತಾಲೂಕು ಆಡಳಿತ ಹಾಗು ನಗರಸಭೆ ಆಡಳಿತಗಳನ್ನು ಅಭಿನಂದಿಸುವುದರ ಜೊತೆಗೆ ಪ್ರತಿ ವರ್ಷ ಮಾ.೨೨ರಂದು ಕೆರೆಗಳ ಹಬ್ಬ ಆಚರಣೆಗೆ ಮನವಿ ಮಾಡುವ ಮೂಲಕ ಘೋಷಿಸಿದರು.
   ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ನಗರಸಭೆಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಆರ್. ವೇಣುಗೋಪಾಲ್ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದರ ಫಲವಾಗಿ ತಾಲೂಕು ಆಡಳಿತದ ನೆರವಿನೊಂದಿಗೆ ನಗರಸಭೆ ಆಡಳಿತ ಕೆರೆಗಳ ಬೌಂಡರಿ ನಿಗದಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಿದ್ದು, ಈ ಪೈಕಿ ಇದುವರೆಗೂ ೧೮ ಕೆರೆಗಳ ಬೌಂಡರಿ ನಿಗದಿಪಡಿಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
   ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪ್ರಮುಖರಾದ ಮುರುಗನ್, ಪ್ರಸನ್ನ, ಯೋಗೇಶ್, ಬಿ.ಎನ್ ರಾಜು, ಚಂದ್ರಶೇಖರ್, ಸುಬ್ಬೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment