ಭದ್ರಾವತಿ, ಫೆ. ೨೨: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಕೊಲೆ ಯತ್ನ ನಡೆದಿರುವ ಘಟನೆ ತಾಲೂಕಿನ ಶಂಕರಘಟ್ಟದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಶಂಕರಘಟ್ಟ ನಿವಾಸಿ ಮಮತಾ ಎಂಬುವರು ಹಲ್ಲೆಗೊಳಗಾಗಿದ್ದು, ಮಧ್ಯಾಹ್ನ ೧.೪೫ರ ಸುಮಾರಿನಲ್ಲಿ ಸುಮಾರು ೫ ಜನರು ಏಕಾಏಕಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಮತಾ ಕುಟುಂಬದವರು ೨೦೦೮ರಲ್ಲಿ ಜಮೀನು ಖರೀದಿಸಿದ್ದು, ಆದರೆ ಇದುವರೆಗೂ ಜಮೀನು ನೋಂದಾಣಿ ಮಾಡಿಕೊಡದೆ ಇರುವುದು ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರ ತನಿಖೆ ನಂತರ ನಿಖರವಾದ ಮಾಹಿತಿ ಲಭ್ಯವಾಗಲಿದೆ.
No comments:
Post a Comment