Tuesday, March 23, 2021

೧೮೫ನೇ ಶ್ರಿ ರಾಮಕೃಷ್ಣ ಪರಮಹಂಸರ ಜಯಂತಿ

ಭದ್ರಾವತಿ ಹಳೇನಗರದ ಖಂಡೇರಾವ್ ಕೊಪ್ಪಲ್‌ನಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲಾಶ್ರಮದಲ್ಲಿ ೧೮೫ನೇ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಲಾಯಿತು.
   ಭದ್ರಾವತಿ, ಮಾ. ೨೩: ಹಳೇನಗರದ ಖಂಡೇರಾವ್ ಕೊಪ್ಪಲ್‌ನಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲಾಶ್ರಮದಲ್ಲಿ ೧೮೫ನೇ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಲಾಯಿತು.
   ೧೯೫೧ರಲ್ಲಿ ಸಂಗೀತ ವಿದ್ವಾನ್ ದಿವಂಗತ ಎಚ್.ಎನ್ ರಾಜಣ್ಣನವರಿಂದ ಸ್ಥಾಪಿತವಾದ ಈ ಗುರುಕುಲಾಶ್ರಮದಲ್ಲಿ ಪ್ರತಿ ವರ್ಷ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಜಯಂತಿ ಅಂಗವಾಗಿ ಭಜನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಗುರುಕುಲಾಶ್ರಮದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment