ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಸತ್ಯಾಗ್ರಹ
ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಭದ್ರಾವತಿ, ಮಾ. ೧೮: ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಹಳೇಜೇಡಿಕಟ್ಟೆ ಸರ್ವೆ ನಂ.೭೮ರಲ್ಲಿ ಸುಮಾರು ೪೦ ವರ್ಷದ ೪-೫ ತೆಂಗಿನ ಮರಗಳನ್ನು ಮಾ.೧೬ರಂದು ಜಮೀನಿನ ಪಕ್ಕದ ನಿವೇಶನದ ಮಾಲೀಕ, ಅಂತರಗಂಗೆ ಗ್ರಾಮದ ನಿವಾಸಿ ನಾಗರಾಜ್ ಎಂಬುವರು ಕಡಿದು ಹಾಕಿದ್ದು, ಅಲ್ಲದೆ ಕೆಲವು ರೌಡಿಗಳೊಂದಿಗೆ ನಮ್ಮ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ವೆಸಗಿಸಿ ಜಾತಿನಿಂದನೆ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅದೇ ದಿನ ದೂರು ನೀಡಲಾಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ರಾಜಕೀಯ ಪ್ರಭಾವ ಬೀರುವ ಮೂಲಕ ದೂರು ದಾಖಲಾಗದಂತೆ ಪೊಲೀಸ್ ಠಾಣಾಧಿಕಾರಿಗಳಿಗೇ ಬೆದರಿಕೆ ಹಾಕಲಾಗುತ್ತಿದೆ ಎಂದು ಪೂರ್ಣಿಮಾ ಆರೋಪಿಸಿದರು.
ಗೂಂಡಾಗಿರಿ ಮೂಲಕ ದೌರ್ಜನ್ಯ ವೆಸಗುತ್ತಿರುವವರ ಹಾಗು ಅಕ್ರಮವಾಗಿ ತೆಂಗಿನ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಕುಟುಂಬದವರಿಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
No comments:
Post a Comment