Monday, March 29, 2021

ಸುಮಾರು ೨ ವರ್ಷಗಳ ನಂತರ ನಗರಸಭೆಗೆ ಚುನಾವಣೆ

ಏ.೮ರಿಂದ ನಾಮಪತ್ರ ಸಲ್ಲಿಕೆ, ಏ.೨೭ರಂದು ಮತದಾನ

   ಭದ್ರಾವತಿ, ಮಾ. ೨೯: ಕೊನೆಗೂ ಸುಮಾರು ೨ ವರ್ಷಗಳ ನಂತರ ಇಲ್ಲಿನ ನಗರಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಒಟ್ಟು ೩೫ ವಾರ್ಡ್‌ಗಳಿಗೆ ಏ.೨೭ರಂದು ಚುನಾವಣೆ ನಡೆಯಲಿದೆ.
ಏ.೮ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏ.೧೫ ಕೊನೆಯ ದಿನವಾಗಿದೆ. ಏ.೧೬ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.೧೯ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.
    ಏ.೨೭ರಂದು ಮತದಾನ ನಡೆಯಲಿದ್ದು, ಏ.೩೦ರಂದು ಮತ ಎಣಿಕೆ ನಡೆಯಲಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗ ಸೋಮವಾರ ಆದೇಶ ಹೊರಡಿಸಿದ್ದು, ರಾಜ್ಯದ ೭ ನಗರಸಭೆ, ೩ ಪುರಸಭೆ ಹಾಗು ೨ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಗೆ ಘೋಷಿಸಿದೆ.  
     ಮೀಸಲಾತಿಗೊಂದಲದಿಂದ ಚುನಾವಣೆ ವಿಳಂಬ:
  ನಗರಸಭೆ ೩೫ ವಾರ್ಡ್‌ಗಳ ಮೀಸಲಾತಿ ಸಂಬಂಧ ಹಲವು ಬಾರಿ ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ವಿಚಾರಣೆ ನಡೆದು ಅಂತಿಮ ತೀರ್ಪು ಪ್ರಕಟವಾಗಿ ಸರ್ಕಾರ ಪುನಃ ಹೊಸದಾಗಿ ಮಿಸಲಾತಿ ನಿಗದಿಪಡಿಸಿದ ಹಿನ್ನಲೆಯಲ್ಲಿ ಚುನಾವಣೆ ಸುಮಾರು ೨ ವರ್ಷ ವಿಳಂಬವಾಗಿದೆ. ಹಲವು ಮಂದಿ ನಗರಸಭೆ ಚುನಾವಣೆ ಸ್ಪರ್ಧಿಸಲು ಎದುರು ನೋಡುತ್ತಿದ್ದು, ಇದೀಗ ಪ್ರಮುಖ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

No comments:

Post a Comment