ಸೋಮವಾರ, ಮಾರ್ಚ್ 29, 2021

ಮಾ.೩೦ರಂದು ಕೆಂಪು ನಮನ, ಪುಸ್ತಕ ಬಿಡುಗಡೆ

ಭದ್ರಾವತಿ, ಮಾ. ೩೦: ಹೋರಾಟಗಾರ ಚಂದ್ರಶೇಖರ್ ತೋರಣಘಟ್ಟರಿಗೆ ಕೆಂಪು ನಮನ ಹಾಗು ಚಂದ್ರಶಿಕಾರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾ.೩೦ರಂದು ಬೆಳಿಗ್ಗೆ ೧೦.೩೦ಕ್ಕೆ ನ್ಯೂಟೌನ್ ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.
    ಪ್ರಮುಖರಾದ ಚಿತ್ರದುರ್ಗದ ಉಪನ್ಯಾಸಕಿ ಸಿ.ವೈ ಯಶೋಧ, ಮೈಸೂರು ಕಂದೇಗಾಲ ಶಿವಣ್ಣ, ಸಾಮಾಜಿಕ ಹೋರಾಟಗಾರ ದೇವೇಂದ್ರಪ್ಪ, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಘಟನಾ ಸಂಚಾಲಕ ರಾಜ್‌ಕುಮಾರ್, ಕೈದಾಳ್ ಕೃಷ್ಣಮೂರ್ತಿ, ಸುರೇಶ್, ಜಿ. ರಾಜು, ಕಾಳುವರಕ್, ಕೈದಾಳ್ ಕೃಷ್ಣಮೂರ್ತಿ, ಡಿ. ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
   ಕಾಳಿಂಗನಹಳ್ಳಿ ಎಂ. ಶಂಕ್ರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ