Tuesday, March 30, 2021

ಚಂದ್ರಶೇಖರ್ ತೋರಣ್ಣಘಟ್ಟರವರ ಹೋರಾಟದ ಗುಣಗಳು ಇತರರಿಗೆ ಸ್ಪೂರ್ತಿದಾಯಕ : ಕೈದಾಳ್ ಕೃಷ್ಣಮೂರ್ತಿ


ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋರಾಟಗಾರ ಚಂದ್ರಶೇಖರ್ ತೋರಣಘಟ್ಟರಿಗೆ ಚಂದ್ರ ನಮನ ಹಾಗು ಚಂದ್ರಶಿಕಾರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೈದಾಳ್ ಕೃಷ್ಣಮೂರ್ತಿರವರ ಚಂದ್ರಶಿಕಾರಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
   ಭದ್ರಾವತಿ, ಮಾ. ೩೦: ಚಂದ್ರಶೇಖರ್ ತೋರಣಘಟ್ಟರವರು ಸಮಾಜಮುಖಿ ಚಿಂತನೆಗಳೊಂದಿಗೆ ಹಲವಾರು ಚಳುವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಇತರರಿಗೆ ಸ್ಫೂರ್ತಿದಾಯಕರಾಗಿದ್ದರು ಎಂದು ಚಂದ್ರಶಿಕಾರಿ ಪುಸ್ತಕದ ಸಂಪಾದಕ ಕೈದಾಳ್ ಕೃಷ್ಣಮೂರ್ತಿ ತಿಳಿಸಿದರು.
   ಅವರು ಮಂಗಳವಾರ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋರಾಟಗಾರ ಚಂದ್ರಶೇಖರ್ ತೋರಣಘಟ್ಟರಿಗೆ ಚಂದ್ರ ನಮನ ಹಾಗು ಚಂದ್ರಶಿಕಾರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
   ಹೋರಾಟಗಾರರಲ್ಲಿ ಸದಾಕಾಲ ಸಮಾಜಮುಖಿ ಚಿಂತನೆಗಳಿರಬೇಕು. ಎಲ್ಲರನ್ನು ಸಂಘಟಿಸುವ ಮನೋಭಾವವಿರಬೇಕು. ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಿರಬೇಕು. ಆಗ ಮಾತ್ರ ಹೋರಾಟಗಳು ಅವರಿಗೆ ಯಶಸ್ವಿ ತಂದುಕೊಡುತ್ತವೆ. ಈ ನಿಟ್ಟಿನಲ್ಲಿ ತೋರಣಘಟ್ಟರವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.
   ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ, ಪ್ರಮುಖರಾದ ಚಿತ್ರದುರ್ಗದ ಉಪನ್ಯಾಸಕಿ ಸಿ.ವೈ ಯಶೋಧ, ಮೈಸೂರು ಕಂದೇಗಾಲ ಶಿವಣ್ಣ, ಸಾಮಾಜಿಕ ಹೋರಾಟಗಾರ ದೇವೇಂದ್ರಪ್ಪ, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ, ಪ್ರಜಾಪ್ರತಿನಿಧಿ ಸುರೇಶ್ ಸೇರಿದಂತೆ ಇನ್ನಿತರರು ಚಳುವಳಿಗಳಲ್ಲಿ ತೋರಣಘಟ್ಟರವರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
   ಜಿ. ರಾಜು, ಕಾಳುವರಕ್, ಶ್ರೀನಿವಾಸ್, ಡಿ. ರಾಜು, ಡಾ. ಮಂಜುನಾಥ್, ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾಳಿಂಗನಹಳ್ಳಿ ಎಂ. ಶಂಕ್ರಣ್ಣ ಅಧ್ಯಕ್ಷತೆ ವಹಿಸಿದ್ದರು.


ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋರಾಟಗಾರ ಚಂದ್ರಶೇಖರ್ ತೋರಣಘಟ್ಟರಿಗೆ ಚಂದ್ರ ನಮನ ಹಾಗು ಚಂದ್ರಶಿಕಾರಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಚಿತ್ರದುರ್ಗದ ಉಪನ್ಯಾಸಕಿ ಸಿ.ವೈ ಯಶೋಧ, ಮೈಸೂರು ಕಂದೇಗಾಲ ಶಿವಣ್ಣ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.

No comments:

Post a Comment