ಭದ್ರಾವತಿ ಹಳೇನಗರದ ಕೋಟೆ ಏರಿಯಾದಲ್ಲಿರುವ ಹಿಂದೂ ಕೋಟೆ ಗರಡಿ ಮನೆಗೆ ಭೇಟಿ ನೀಡಿದ ದೇವರಾಜ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆಯನೂರು ಶಿವನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಮಾ. ೯: ಹಳೇನಗರದ ಕೋಟೆ ಏರಿಯಾದಲ್ಲಿರುವ ಹಿಂದೂ ಕೋಟೆ ಗರಡಿ ಮನೆಗೆ ದೇವರಾಜ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆಯನೂರು ಶಿವನಾಯ್ಕ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಪ್ರಸ್ತುತ ನಗರದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಹಿಂದೂ ಕೋಟೆ ಗರಡಿ ಮನೆ ಅತ್ಯಂತ ಹಳೇಯದಾದ ಗರಡಿ ಮನೆಯಾಗಿದ್ದು, ಈ ಗರಡಿ ಮನೆಯಲ್ಲಿ ತರಬೇತಿ ಪಡೆದ ಬಹಳಷ್ಟು ಕುಸ್ತಿಪಟು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಆಯನೂರು ಶಿವನಾಯ್ಕರನ್ನು ಗರಡಿ ಮನೆಯ ಹಿರಿಯ ಫೈಲ್ವಾನರು ಹಾಗು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಗರಡಿ ಮನೆ ಅಧ್ಯಕ್ಷ ಬಿ. ದತ್ತಣ್ಣ, ಸೀತಾರಾಮಣ್ಣ, ಕೃಷ್ಣಯ್ಯ, ನಂಜುಂಡಪ್ಪ, ಶಿವಣ್ಣ, ಚನ್ನಬಸಪ್ಪ, ಯಲ್ಲಪ್ಪ, ಧನಂಜಯ, ಟಿ. ವೆಂಕಟೇಶ್ ಮತ್ತು ಯಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment