Sunday, April 18, 2021

ರಂಜಾನ್ ಮಾಸ : ದೀನದಲಿತರಿಗೆ ಆಹಾರ ಸಾಮಾಗ್ರಿ ವಿತರಣೆ

ರಂಜಾನ್ ಮಾಸದ ಹಿನ್ನಲೆಯಲ್ಲಿ ಭದ್ರಾವತಿ ಸಫಾ ಬೈತುಲ್ ಮಾಲ್ ರಿಲಿಜನ್ ಅಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ದೀನದಲಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಏ. ೧೮: ರಂಜಾನ್ ಮಾಸದ ಹಿನ್ನಲೆಯಲ್ಲಿ ನಗರದ ಸಫಾ ಬೈತುಲ್ ಮಾಲ್ ರಿಲಿಜನ್ ಅಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ದೀನದಲಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
    ಟ್ರಸ್ಟ್ ವತಿಯಿಂದ ಪ್ರತಿ ವರ್ಷ ರಂಜಾನ ಮಾಸದಲ್ಲಿ ಆಹಾರ ಸಾಮಗ್ರಿಗಳನ್ನು ದೀನದಲಿತರಿಗೆ ವಿತರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ದೀನದಲಿತರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಟ್ರಸ್ಟ್ ಅಧ್ಯಕ್ಷ ಮೌಲಾನ ಅಸ್ಲಂ ಸಾಬ್ ಅಧ್ಯಕ್ಷತೆ ವಹಿಸಿದ್ದರು. ನಜೀರ್ ಅಹಮದ್,  ಸನಾವುಲ್ಲಾ ಸಾಬ್, ಮೌಲಾನ ಸಗೀರ್ ಸಾಬ್. ಅಫೀಸ್ ಉಲ್ಲಾ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಮುಸ್ತಿ ಸಾಧಿಕ್ ಸಾಬ್ ಪ್ರಾರ್ಥಿಸಿದರು. ಸಾಧಿಕ್ ಮೌಲಾನ ವಂದಿಸಿದರು.

No comments:

Post a Comment