Tuesday, May 18, 2021

ಬಜರಂಗದಳದಿಂದ ಕೋವಿಡ್ ಮೃತದೇಹಗಳ ಸಾಗಾಣಿಕೆಗೆ ವಾಹನ ವ್ಯವಸ್ಥೆ

    ಭದ್ರಾವತಿ, ಮೇ. ೧೮: ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಸೇವಾ ಕಾರ್ಯದಲ್ಲಿ ವಿಶಿಷ್ಟತೆ ಕಾಯ್ದುಕೊಂಡಿರುವ ಬಜರಂಗದಳ ಇದೀಗ ಮೃತ ದೇಹಗಳನ್ನು ಆಸ್ಪತ್ರೆಯಿಂದ ಸಂಬಂಧಪಟ್ಟ ವಾರಸುದಾರರಿಗೆ ತಲುಪಿಸುವ  ಕಾರ್ಯದಲ್ಲೂ ಮುಂದಾಗಿದೆ.
    ಕೊರೋನಾ ಸೋಂಕಿನಿಂದ ಮೃತಪಟ್ಟವರ ದೇಹಗಳನ್ನು ಶಿವಮೊಗ್ಗದಿಂದ ಭದ್ರಾವತಿಗೆ ಸಾಗಿಸಲು ಖಾಸಗಿ ಅಂಬ್ಯುಲೆನ್ಸ್‌ಗಳಲ್ಲಿ ಸುಮಾರು ೧೦ ರಿಂದ ೧೨ ಸಾವಿರ ರು. ಬಾಡಿಗೆ ಪಡೆಯುತ್ತಿದ್ದು, ಇದರಿಂದಾಗಿ ಬಡವರ್ಗದವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ವಿಚಾರ ಅರಿತುಕೊಂಡಿರುವ ಬಜರಂಗದಳ ಕಾರ್ಯಕರ್ತರು ಇದೀಗ ಮೃತ ದೇಹಗಳ ಸಾಗಾಣಿಕೆಗೆ ವಾಹನ ವ್ಯವಸ್ಥೇ ಕೈಗೊಂಡಿದೆ.
    ಬಡವರ್ಗದವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ರಾಘವನ್ ವಡಿವೇಲು ಮೊ: ೭೦೧೯೭೮೮೪೮೫, ದೇವರಾಜ್ ಅರಳಿಹಳ್ಳಿ ಮೊ: ೯೬೩೨೩೧೯೫೫೫, ಸುನಿಲ್ ಮೊ: ೯೪೮೩೪೧೮೨೮೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.  

No comments:

Post a Comment