ಶುಕ್ರವಾರ, ಜೂನ್ 25, 2021

ಭದ್ರಾವತಿಯಲ್ಲಿ ೩೫ ಸೋಂಕು : ಒಬ್ಬರು ಬಲಿ

ಭದ್ರಾವತಿ, ಜೂ. ೨೫: ಲಾಕ್‌ಡೌನ್ ಸಡಿಲಗೊಂಡು ೫ ದಿನ ಕಳೆದಿದ್ದು, ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸೋಂಕಿನ ಪ್ರಮಾಣ ೫೦ರ ಗಡಿ ದಾಟಿಲ್ಲ.
   ಶುಕ್ರವಾರ ೩೫ ಸೋಂಕು ದೃಢಪಟ್ಟಿದ್ದು, ೮೬೭ ಮಾದರಿ ಸಂಗ್ರಹಿಸಲಾಗಿದೆ. ೨೧ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ೭೦೩೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ೬೯೩೭ ಮಂದಿ ಗುಣಮುಖರಾಗಿದ್ದಾರೆ. ೯೯ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.
    ಒಟ್ಟು ೭೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಪ್ರದೇಶದಲ್ಲಿ ೨೩ ಕಂಟೈನ್‌ಮೆಂಟ್ ಜೋನ್‌ಗಳಿವೆ. ಇದುವರೆಗೂ ೧೪೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ೨೦ ಜೋನ್‌ಗಳಿದ್ದು, ೨೯ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ