ಭದ್ರಾವತಿಯಲ್ಲಿ ಪ್ರೀತಿಯಿಂದ ಸಾಕಿದ ೧೬ ತಿಂಗಳ ಲಾಬ್ ಜಾತಿಯ ಶ್ವಾನವನ್ನು ಮಾಲೀಕರು ಉಚಿತವಾಗಿ ಅರಣ್ಯ ಇಲಾಖೆಗೆ ನೀಡುವ ಮೂಲಕ ಮಾನವೀಯತೆ ಮೆರೆದರು.
ಭದ್ರಾವತಿ, ಜು. ೫: ಪ್ರೀತಿಯಿಂದ ಸಾಕಿದ ೧೬ ತಿಂಗಳ ಲಾಬ್ ಜಾತಿಯ ಶ್ವಾನವನ್ನು ಮಾಲೀಕರು ಉಚಿತವಾಗಿ ಅರಣ್ಯ ಇಲಾಖೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಎಚ್. ರವಿಕುಮಾರ್ ಮತ್ತು ರಮೇಶ್ರವರು ಜೊತೆಗೂಡಿ ಸುಮಾರು ೧ ವರ್ಷದ ಶ್ವಾನವನ್ನು ಖರೀದಿಸಿ ಪಾಲನೆ ಮಾಡುತ್ತಿದ್ದರು. ಆದರೆ ಈ ಶ್ವಾನದ ನಿರ್ವಹಣೆ ಕಷ್ಟಕರವಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಶ್ವಾನ ಪಡೆದಿರುವ ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ಈ ಶ್ವಾನವನ್ನು ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅರಣ್ಯ ಇಲಾಖೆ ಸಹ ಈ ಶ್ವಾನಕ್ಕೆ ಅಗತ್ಯ ತರಬೇತಿ ನೀಡಿ ಸದ್ಬಳಕೆ ಮಾಡಿಕೊಳ್ಳಲಿದೆ ಎಂದರು.
No comments:
Post a Comment