Saturday, July 10, 2021

ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳವು ಪ್ರಕರಣ : ೩ ಜನರ ಸೆರೆ

ಭದ್ರಾವತಿ ಹಳೇನಗರ ಪೊಲೀಸರ ಕಾರ್ಯಾಚರಣೆ


ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳ್ಳತನ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದ ೩ ಜನರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು.
    ಭದ್ರಾವತಿ, ಜು. ೧೦: ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳ್ಳತನ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದ ೩ ಜನರನ್ನು ಹಳೇನಗರ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ನೆಹರು ನಗರದ ನಿವಾಸಿ, ಗುಜರಿ ವ್ಯಾಪಾರಿ ದಾದಪೀರ್(೨೯), ಸಾದತ್ ಕಾಲೋನಿ ನಿವಾಸಿ ಸಲೀಂ ಅಲಿಯಾಸ್ ಚನ್ನಗಿರಿ(೪೩) ಹಾಗು ಹನುಮಂತಪ್ಪ ಶೆಡ್ ನಿವಾಸಿ ಷಫಿವುಲ್ಲಾ(೩೨) ಬಂಧಿತರಾಗಿದ್ದು, ಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ತರೀಕೆರೆ ರಸ್ತೆ ಶಿವನಿ ಕ್ರಾಸ್ ಬಳಿ ೩ ಜನರನ್ನು ಸೆರೆ ಹಿಡಿದಿದ್ದಾರೆ.
     ಬಂಧಿತರಿಂದ ೨೦ ಚೀಲ, ಒಟ್ಟು ೭೦೦ ಕೆ.ಜಿ ತೂಕದ ಸುಮಾರು ೧,೨೯,೫೦೦ ರು. ಮೌಲ್ಯದ ಅಡಕೆ ಹಾಗು ಕೃತ್ಯಕ್ಕೆ ಬಳಸಿದ ೩,೦೦,೦೦೦ ರು. ಮೌಲ್ಯದ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
    ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಮತ್ತು ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ಹಳೇನಗರ ಪೊಲೀಸ್ ಠಾಣಾಧಿಕಾರಿ ಪ್ರಭು ಡಿ ಕೆಳಗಿನ ಮನಿ ಮತ್ತು ಸಿಬ್ಬಂದಿಗಳಾದ ಹಾಲಪ್ಪ, ಫಿರೋಜ್, ಮಂಜುನಾಥ್ ಮತ್ತು ಸುನಿಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

No comments:

Post a Comment