Thursday, August 26, 2021

ಅಶೋಕ್‌ರಾವ್ ವಾಗ್ಮೋಡೆ ನಿಧನ

ಅಶೋಕ್‌ರಾವ್ ವಾಗ್ಮೋಡೆ
    ಭದ್ರಾವತಿ, ಆ. ೨೬: ಎಂಪಿಎಂ ಕಾರ್ಖಾನೆಯ ಗುತ್ತಿಗೆದಾರ, ಮರಾಠ ಸಮಾಜದ ಮುಖಂಡರಾದ ಅಶೋಕ್‌ರಾವ್ ವಾಗ್ಮೋಡೆ(೬೦) ನಿಧನ ಹೊಂದಿದರು.
    ಮೃತರು ವಿಐಎಸ್‌ಎಲ್ ಆಸ್ಪತ್ರೆ ಮುಂಭಾಗದಲ್ಲಿರುವ ಸುನಿಲ್ ಮೆಡಿಕಲ್ ಸ್ಟೋರ್ ಮಾಲೀಕ ಸುನಿಲ್ ಅವರ ತಂದೆಯಾಗಿದ್ದು, ಪತ್ನಿ ಮತ್ತು ಪುತ್ರ ಸುನಿಲ್ ಹಾಗು ಸೊಸೆ, ಮೊಮಕ್ಕಳನ್ನು ಹೊಂದಿದ್ದರು. ಮೃತರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

No comments:

Post a Comment