ಎಂ. ಶ್ರೀನಿವಾಸನ್
ಭದ್ರಾವತಿ, ಆ. ೨೩: ದಲಿತ ಮುಖಂಡ, ಪ್ರಗತಿಪರ ಹೋರಾಟಗಾರ ಎಂ. ಶ್ರೀನಿವಾಸನ್ ಅವರ ಮೊದಲ ಪುಣ್ಯ ಸ್ಮರಣೆ ಕಾರ್ಯಕ್ರಮ ಆ.೨೪ರಂದು ಬೆಳಿಗ್ಗೆ ನ್ಯೂಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದೆ.
ಎಂ. ಶ್ರೀನಿವಾಸನ್ ಜಿಲ್ಲಾ ಆದಿದ್ರಾವಿಡ ತಮಿಳು ಹಿತ ರಕ್ಷಣಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾರ್ಮಿಕ, ರೈತ ಹಾಗು ಪ್ರಗತಿಪರ ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಚಿರಪರಿಚಿತರಾಗಿದ್ದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಆದಿದ್ರಾವಿಡ ತಮಿಳು ಹಿತ ರಕ್ಷಣಾ ಸಮಿತಿ ಅಧ್ಯಕ್ಷ, ಎಂ. ಶ್ರೀನಿವಾಸನ್ ಪುತ್ರ ಎಸ್. ನಿತ್ಯಾನಂದನ್ ಕೋರಿದ್ದಾರೆ.
No comments:
Post a Comment