ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಭದ್ರಾವತಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
ಭದ್ರಾವತಿ, ಸೆ. ೧೫: ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
ನಮ್ಮ ಪೂರ್ವಿಜರು ತಲೆ ತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಹಬ್ಬಗಳಲ್ಲಿ ಎಳೆ ಅಷ್ಟಮಿ ಸಹ ಒಂದಾಗಿದ್ದು, ಈ ಹಬ್ಬವನ್ನು ಕೆಲವೆ ಕೆಲವು ಮನೆತನದವರು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಚರಕದಿಂದ ನೂಲು ತೆಗೆದು ದೇವಿ ಮುಂಭಾಗದಲ್ಲಿಟ್ಟು ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷವಾಗಿದೆ.
ಎಳೆ ಅಷ್ಟಮಿ, ಎಳೆ ಗೌರಿ, ಸಣ್ಣಗೌರಿ, ನೊಂಪಿ ಗೌರಿ ಸೇರಿದಂತೆ ಹಲವು ರೀತಿಯಲ್ಲಿ ಕರೆಯುವ ಈ ಹಬ್ಬವನ್ನು ವಿಶೇಷವಾಗಿ ಕಟ್ಟುನಿಟ್ಟಿನಿಂದ ಆಚರಣೆ ಮಾಡಲಾಗುತ್ತದೆ. ಗಣಪತಿ ಹಬ್ಬ ಮುಗಿದು ೫ನೇ ದಿನಕ್ಕೆ ಬರುವ ಅಷ್ಟಮಿ ತಿಥಿ ಮೂಲ ನಕ್ಷತ್ರದಂದು ಈ ಹಬ್ಬ ಆಚರಿಸುವುದು ವಾಡಿಕೆಯಾಗಿದೆ. ದೇವಿ ಮುಂಭಾಗ ಪೂಜಿಸಲ್ಪಟ್ಟ ಎಳೆಗಳನ್ನು ಭಕ್ತರು ಬೆಸ ಸಂಖ್ಯೆಯಲ್ಲಿ ಮನೆಗಳಿಗೆ ಕೊಂಡೊಯ್ಯುದು ದೀಪಾವಳಿ ಹಬ್ಬದ ವರೆಗೂ ಪೂಜಿಸಿ ಈ ಹಬ್ಬಕ್ಕೆ ತೆರೆ ಎಳೆಯುತ್ತಾರೆ.
ದೇವಸ್ಥಾನದಲ್ಲಿ ಜರುಗಿದ ಹಬ್ಬದಲ್ಲಿ ಎಂ.ಹರನಾಥ ಕೋಠಿ, ಡಿ.ಕೆ ಶಿವಲಿಂಗಪ್ಪ, ಡಿ.ಕೆ ಪಂಚಣ್ಣ, ಹಾಲೇಶ್, ನಾಗರಾಜ್ ಮತ್ತು ನಾಗೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment