Monday, September 27, 2021

ಟಗರ್ ಕಾಳಗ : ‘ಇಂಡಿಯನ್ ಆರ್ಮಿ’ ೩ನೇ ಬಹುಮಾನ

ದಾವಣಗೆರೆಯಲ್ಲಿ ನಡೆದ ಟಗರು ಕಾಳಗದಲ್ಲಿ ಭದ್ರಾವತಿ ತಾಲೂಕಿನ ಕಲ್ಪನಹಳ್ಳಿಯ 'ಇಂಡಿಯನ್ ಆರ್ಮಿ' ಎಂಬ ಟಗರು ಮೂರನೇ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಸೆ. ೨೭: ದಾವಣಗೆರೆಯಲ್ಲಿ ನಡೆದ ಟಗರು ಕಾಳಗದಲ್ಲಿ ತಾಲೂಕಿನ ಕಲ್ಪನಹಳ್ಳಿಯ 'ಇಂಡಿಯನ್ ಆರ್ಮಿ' ಎಂಬ ಟಗರು ಮೂರನೇ ಬಹುಮಾನ ಪಡೆದುಕೊಂಡಿದೆ.
    ಕಲ್ಪನಹಳ್ಳಿಯ ದೇವೇಂದ್ರನಾಯ್ಕ್ ಎಂಬುವರು ಕಳೆದ ೩ ವರ್ಷಗಳಿಂದ ಈ ಟಗರನ್ನು ಸಾಕುತ್ತಿದ್ದಾರೆ. ದಾವಣಗೆರೆಯಲ್ಲಿ ಜರುಗಿದ ಕಾಳಗ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ೩ನೇ ಸ್ಥಾನ ಕಾಯ್ದುಕೊಂಡು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

No comments:

Post a Comment