Monday, September 6, 2021

ಎ.ಕೆ ಜಯಕುಮಾರ್ ನಿಧನ

ಎ.ಕೆ ಜಯಕುಮಾರ್    
ಭದ್ರಾವತಿ ಸೆ. ೬:  ಆರ್ಯವೈಶ್ಯ ಸಮಾಜದ ಮುಖಂಡ ಎ.ಕೆ ಜಯಕುಮಾರ್ (೪೮) ಭಾನುವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.
      ತಾಯಿ ಹಾಗು ಕಿರಿಯ ಸಹೋದರನನ್ನು ಹೊಂದಿದ್ದರು.  ಜಯಕುಮಾರ್ ಪ್ರಸ್ತುತ ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಅರ್ಯವೈಶ್ಯ ಸಮಾಜದ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜದ ವತಿಯಿಂದ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

No comments:

Post a Comment