ಭದ್ರಾವತಿಯಲ್ಲಿ ಕಾಗದ ನಗರದ ಎಂಪಿಎಂ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆ ಆಯೋಜಿಸುವ ಮೂಲಕ ಶಾಲೆಯಲ್ಲಿ ಸುಮಾರು ೧೭ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ.ಆರ್ ಮಹೇಶ್ ಅವರನ್ನು ಸನ್ಮಾನಸಿ ಬೀಳ್ಕೊಡುಗೆ ನೀಡಿದರು.
ಭದ್ರಾವತಿ, ನ. ೧೮: ಶಾಲಾ ಮಕ್ಕಳೇ ಕಾರ್ಯಕ್ರಮ ಆಯೋಜಿಸಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಾಗದ ನಗರದ ಎಂಪಿಎಂ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆ ಆಯೋಜಿಸುವ ಮೂಲಕ ಶಾಲೆಯಲ್ಲಿ ಸುಮಾರು ೧೭ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ.ಆರ್ ಮಹೇಶ್ ಅವರನ್ನು ಸನ್ಮಾನಸಿ ಬೀಳ್ಕೊಡುಗೆ ನೀಡಿದರು.
ಎಲ್ಕೆಜಿಯಿಂದ ೩ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ವಿದ್ಯಾರ್ಥಿಗಳಾದ ದೃವನಶ್ರೀ, ವರ್ಷಿತ, ಪೃಥ್ವಿ, ಸ್ಪೂರ್ತಿ, ರಜತ್ ಮತ್ತು ಆಕಾಶ್ ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲ ಆರ್. ಸತೀಶ್, ಉಪ ಪ್ರಾಂಶುಪಾಲ ನಾಗರಾಜ್ ಪಾಲ್ಗೊಂಡಿದ್ದರು. ಅನುರಾಧ ಮತ್ತು ಮಾರುತಿ ಕುಮಾರ್ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು. ಪರಿಣಿತಾ ಮತ್ತು ಪ್ರೇರಣಾ ಪ್ರಾರ್ಥಿಸಿ, ಬಿಂದು ನಿರೂಪಿಸಿದರು.
No comments:
Post a Comment