Tuesday, December 7, 2021

ಸಿಪಿಐ(ಎಂ) ಸಭೆ : ಜಿಲ್ಲಾ ಕಾರ್ಯದರ್ಶಿಯಾಗಿ ಎಂ. ನಾರಾಯಣ ಆಯ್ಕೆ

ಎಂ. ನಾರಾಯಣ
    ಭದ್ರಾವತಿ, ಡಿ. ೭: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಮಿಕ ಮುಖಂಡ ಎಂ. ನಾರಾಯಣ ಆಯ್ಕೆಯಾಗಿದ್ದಾರೆ.
    ಜಿಲ್ಲಾ ಸಮ್ಮೇಳನದ ಭಾಗವಾಗಿ ಇನ್ಶೂರೆನ್ಸ್ ಎಂಪ್ಲಾಯಿಸ್ ಯೂನಿಯನ್ ಕಛೇರಿಯಲ್ಲಿ ರಾಜ್ಯ ಸಮಿತಿ ಸದಸ್ಯ ಕಾಂಮ್ರೇಡ್ ಬಾಲಕೃಷ್ಣ ಶೆಟ್ಟರ್ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ನೂತನ ಜಿಲ್ಲಾ ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾಗಿ ಕೆ. ಮಂಜಣ್ಣ, ಎಂ. ಅನಂತರಾಮು, ಜನಾರ್ಧನನಾಯಕ್, ತುಳಸಿಪ್ರಭಾ, ನಾಗೇಶ್, ಪಿ. ಚಂದ್ರಪ್ಪ ಹಾಗು ಹಿರಿಯ ವಕೀಲರಾದ ಜಿ.ಎಸ್ ನಾಗರಾಜ ಮತ್ತು ಕೆ. ಪ್ರಭಾಕರನ್ ಆಯ್ಕೆಯಾದರು.
    ಮುಂದಿನ ದಿನಗಳಲ್ಲಿ ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಹಾಗು ಮಹಿಳಾ ಸೇರಿದಂತೆ ಪಕ್ಷದ ವಿವಿಧ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬಲಿಷ್ಠಗೊಳಿಸುವ ಜೊತೆಗೆ ಹೆಚ್ಚಿನ ಹೋರಾಟಗಳನ್ನು ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
    ಮುಂದಿನ ವರ್ಷ ಜ.೨ ರಿಂದ ೪ರವರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ರಾಜ್ಯ ಸಮ್ಮೇಳನ ನಡೆಯಲಿದ್ದು, ಎಂ. ನಾರಾಯಣ ಮತ್ತು ಕೆ. ಪ್ರಭಾಕರನ್ ಅವರನ್ನು ಪ್ರತಿನಿಧಿಗಳಾಗಿ ಹಾಗು ಪಿ. ಚಂದ್ರಪ್ಪ ಅವರನ್ನು ವೀಕ್ಷಕರಾಗಿ ಆಯ್ಕೆ ಮಾಡಲಾಯಿತು.

No comments:

Post a Comment