Thursday, December 9, 2021

ವಿಧಾನ ಪರಿಷತ್ ಚುನಾವಣೆ : ಸಾರ್ವಜನಿಕರಿಗೆ ಪ್ರವೇಶ ನಿಷೇಧ

    ಭದ್ರಾವತಿ, ಡಿ. ೯: ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಗರಸಭೆ ಕಛೇರಿಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿದ್ದು, ಶುಕ್ರವಾರ ಮತದಾನ ನಡೆಯುವ ಸಂಬಂಧ ಮತಗಟ್ಟೆ ಕೇಂದ್ರದಿಂದ ೧೦೦ ಮೀಟರ್ ವಿಸ್ತೀರ್ಣದವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
    ಸ್ಥಳೀಯ ಸಂಸ್ಥೆ ನಗರಸಭೆ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆ ಕೇಂದ್ರ (ಮತಗಟ್ಟೆ ಸಂಖ್ಯೆ ೧೮೦) ತೆರೆಯಲಾಗಿದೆ. ಮತದಾನ ಬೆಳಿಗ್ಗೆ ೮ ರಿಂದ ಸಂಜೆ ೪ರವರೆಗೆ ನಡೆಯಲಿದ್ದು, ಸಾರ್ವಜನಕರು ಸಹಕರಿಸುವಂತೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.

No comments:

Post a Comment