Wednesday, January 19, 2022

ನಗರಸಭೆಗೆ ಎಂ. ಪ್ರಭಾಕರ್ ಸೇರಿ ೫ ಮಂದಿ ನಾಮನಿರ್ದೇಶನ

    ಭದ್ರಾವತಿ, ಜ. ೧೯: ರಾಜ್ಯ ಸರ್ಕಾರ ನಗರಸಭೆಗೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಎಚ್. ಕರಿಗೌಡ ಸೇರಿದಂತೆ ೫ ಮಂದಿಯನ್ನು ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
    ಈ ಕುರಿತು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗಳಿಗೆ ಹಾಗು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಅದರಂತೆ ಯೋಜನಾ ನಿರ್ದೇಶಕರು ನಗರಸಭೆ ಪೌರಾಯುಕ್ತರಿಗೆ ಬುಧವಾರ ನೇಮಕಗೊಳಿಸಿರುವುದನ್ನು ಖಚಿತ ಪಡಿಸಿದ್ದಾರೆ.







    ಅಪ್ಪರ್ ಹುತ್ತಾ ನಿವಾಸಿ ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಎಚ್. ಕರಿಗೌಡ, ಹೊಸಮನೆ ಎನ್‌ಎಂಸಿ ನಿವಾಸಿ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಹೊಸಸಿದ್ದಾಪುರ ನಿವಾಸಿ ಮಂಜುನಾಥ್, ಗಾಂಧಿನಗರದ ನಿವಾಸಿ ಎಚ್.ಎಂ ರವಿಕುಮಾರ್ ಮತ್ತು ಉಜ್ಜನಿಪುರ ನಿವಾಸಿ ಅನ್ನಪೂರ್ಣ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

No comments:

Post a Comment