Wednesday, April 27, 2022

ಡಾ. ಶ್ವೇತಾ ಅಮಿತ್‌ಗೆ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್

ಭದ್ರಾವತಿ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಏ.೨೭: ನಗರದ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ನವದೆಹಲಿಯ ಉದ್ಯೋಗ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಾ. ಶ್ವೇತಾ ಅಮಿತ್‌ರವರಿಗೆ ಪ್ರಶಸ್ತಿಯನ್ನು ವಿತರಿಸಿದರು.  ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಆಫ್ ಚಾಲೆಂಜ್-೫ರಲ್ಲಿ ಹೆಲ್ಮೆಟ್ ಮೌಂಟ್ ಕನ್‌ಫರ್ಮಬಲ್ ಆಂಟೈನಾ ಎಂಬ ವಿಷಯದಲ್ಲಿ ಸಾಧಿಸಿದ ಸಾಧನೆಯ ಫಲವಾಗಿ ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಡಾ.ಶ್ವೇತಾ ಅವರನ್ನು ಗೌರವಿಸಲಾಗಿದೆ.
    ಇನ್ನೋವೇಷನ್ಸ್ ಫಾರ್ ಡಿಫೆನ್ಸ್ ಎಕ್ಷಲೆನ್ಸಿ ಆಯ್ಕೆಯ ಜವಾಬ್ದಾರಿಯನ್ನು ನಿರ್ವಹಿಸಿ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರನ್ನು ಶಿಫಾರಸ್ಸು ಮಾಡಿತ್ತು.  ಡಾ.ಶ್ವೇತಾ ಅಮಿತ್‌ರವರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.  

No comments:

Post a Comment