ಭದ್ರಾವತಿ, ಜು. 21: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅವಶ್ಯವಿರುವ ರು.300 ಕೋ. ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರ ದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಒತ್ತಾಯಿಸುವಂತೆ ರಾಜ್ಯ ಸಂಸದರಿಗೆ ಕಾರ್ಮಿಕ ಸಂಘದ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ರಾಜ್ಯದ ಸಂಸದರಾದ ತೇಜಸ್ವಿ ಸೂರ್ಯ, ಬಿ.ಎನ್ ಬಚ್ಚೇಗೌಡ, ಅಣ್ಣಾ ಸಾಹಿಬ್ ಜೊಲ್ಲೆ, ಡಾ. ಉಮೇಶ್ ಜಾಧವ್ ಮತ್ತು ಕರಡಿ ಸಂಗಣ್ಣ ಅಮರಪ್ಪ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ನಿಯೋಗ
ಕಾರ್ಖಾನೆಗೆ ರು.300 ಕೋ. ಬಂಡವಾಳ ತೊಡಗಿಸುವಂತೆ ಎಲ್ಲಾ ಸಂಸದರು ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾರವರನ್ನು ಭೇಟಿಮಾಡಿ ಚರ್ಚಿಸಲು ಸಹಕರಿಸುವಂತೆ ಕೋರಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಯು.ಎ ಬಸಂತ್ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು, ಖಜಾಂಚಿ ಎಸ್. ಮೋಹನ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿ ಉಪಸ್ಥಿತರಿದ್ದರು.
No comments:
Post a Comment